ಕಾಲಿಗೆ ಹಾಕುವ ಚಪ್ಪಲಿಗೆ ಗ್ಯಾರೆಂಟಿ ಕೇಳ್ತೇವೆ, ನಿಮ್ಮ ಲಸಿಕೆಗೆ ಖಾತ್ರಿ ಕೊಟ್ರಷ್ಟೇ ಹಾಕಿಸಿಕೊಳ್ಳುವೆ..

author img

By

Published : Sep 17, 2021, 7:39 PM IST

Youth refused take vaccine in Hassan

ಈ ವೇಳೆ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಯುವಕ ಲಸಿಕೆ ಹಾಕಿಸಿಕೊಂಡಿಲ್ಲ. ಯುವಕನ ಜೊತೆ ಗ್ರಾಮದ ಮತ್ತಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ..

ಹಾಸನ : ಲಸಿಕೆ ಬಗ್ಗೆ ಗ್ಯಾರೆಂಟಿ ಕೊಟ್ರೆ ಹಾಕಿಸಿಕೊಳ್ಳುವುದಾಗಿ ಯುವಕನೋರ್ವ ವ್ಯಾಕ್ಸಿನ್​ ಪಡೆಯಲು ನಿರಾಕರಿಸಿದ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿರಾಜನಪಟ್ಟಣ ಗ್ರಾಮದಲ್ಲಿ ನಡೆದಿದೆ.

ಹಾಸನದಲ್ಲಿ ಲಸಿಕೆ ಪಡೆಯಲು ಯುವಕ ನಿರಾಕರಣೆ

ಹಾಸನದಲ್ಲಿ ಸುಮಾರು 80 ಸಾವಿರ ಲಸಿಕೆ ಹಾಕುವ ಸಲುವಾಗಿ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ, ಅಧಿಕಾರಿಗಳು ಮನೆ-ಮನೆಗೆ ತೆರಳಿ ಜನರಿಗೆ ಲಸಿಕೆ ಪಡೆಯುವಂತೆ ಮನವಿ ಮಾಡುತ್ತಿದ್ದರು. ಈ ವೇಳೆ ಪ್ರವೀಣ್ ಎಂಬ ಯುವಕ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ನಿರಾಕರಿಸಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾನೆ.

ಲಸಿಕೆ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು

ಕಾಲಿಗೆ ಹಾಕೋ ಚಪ್ಪಲಿಗೆ ಗ್ಯಾರೆಂಟಿ ಕೇಳುತ್ತೇವೆ, ಅಂತಹದ್ರಲ್ಲಿ ದೇಹಕ್ಕೆ ಪಡೆಯುವ ಲಸಿಕೆಗೆ ಖಾತ್ರಿ ಬೇಡ್ವಾ, ನೀವು ಲಸಿಕೆ ಬಗ್ಗೆ ರೈಟಿಂಗ್​​ನಲ್ಲಿ ಖಾತ್ರಿ ಮಾಡಿ ಬರೆದುಕೊಟ್ಟರೆ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತೇನೆ ಎಂದು ವಾದ ಮಾಡಿದನು.

ಈ ವೇಳೆ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಯುವಕ ಲಸಿಕೆ ಹಾಕಿಸಿಕೊಂಡಿಲ್ಲ. ಯುವಕನ ಜೊತೆ ಗ್ರಾಮದ ಮತ್ತಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.