ಬೇಲೂರು ತಾಲೂಕಿನ ಕೆಲವೆಡೆ ಭೂಕಂಪನದ ಅನುಭವ

author img

By

Published : Sep 17, 2021, 8:36 PM IST

Updated : Sep 17, 2021, 10:40 PM IST

Hassan

ಈ ಬಗ್ಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಹಾಸನದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ವರದಿ ನೀಡುತ್ತೇವೆ ಎಂದಿದ್ದಾರೆ..

ಹಾಸನ : ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಲಘುವಾಗಿ ಭೂಕಂಪವಾಗಿರುವ ಬಗ್ಗೆ ವರದಿಯಾಗಿದೆ. ತಾಲೂಕಿನ ಘಟ್ಟದಹಳ್ಳಿ ಮತ್ತು ಚಟ್ಟಚಟ್ಟಹಳ್ಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಾಯಗೊಂಡನಹಳ್ಳಿ, ದ್ಯಾವಪ್ಪನಹಳ್ಳಿ, ಲಿಂಗಪ್ಪನಕೊಪ್ಪಲು, ಮಹಮದ್ ಪುರ ಹಾಗೂ ಮಾಚೇನಹಳ್ಳಿ ಗ್ರಾಮಗಳಲ್ಲಿ ಲಘುವಾಗಿ ಭೂಕಂಪವಾದ ಬಗ್ಗೆ ವರದಿಯಾಗಿದೆ.

ಬೇಲೂರು ತಾಲೂಕಿನ ಕೆಲವೆಡೆ ಭೂಕಂಪನದ ಅನುಭವ

ದ್ಯಾವಪ್ಪನಹಳ್ಳಿಯ ರಂಗಸ್ವಾಮಿ ಎಂಬುವರ ಮನೆಯಲ್ಲಿ ಸಂಜೆ ಸುಮಾರು 5-28ರ ಸಮಯದಲ್ಲಿ ಅಡುಗೆಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿದ್ದವು. ತಕ್ಷಣ ಮನೆಯಿಂದ ಹೊರಕ್ಕೆ ಬಂದಾಗ ಹಳ್ಳಿ ತುಂಬ ಸುದ್ದಿಯಾಗಿತ್ತು. ಈ ಭಾಗದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.

ಅದೇ ರೀತಿ ಮಹಮದ್ ಪುರ ಗ್ರಾಮದ ವಾಸಿ ಇಮ್ತಾಜ್ ಅವರ ಮನೆಯಲ್ಲಿ ಪಾತ್ರೆಗಳು ಅಲುಗಾಡಿ ಕೆಳಗೆ ಬಿದ್ದಿದೆ. ಇದರಿಂದ ಅವರು ಕೂಡ ಭಯಗೊಂಡು ಹೊರಕ್ಕೆ ಬಂದಿದ್ದಾರೆ. ಲಿಂಗಪ್ಪನಕೊಪ್ಪಲು ಗ್ರಾಮದ ರಸ್ತೆಯಲ್ಲಿ ಸಹ ಭೂಕಂಪದ ಅನುಭವವಾಗಿದೆ. ಈ ಸಂದರ್ಭ ಯಾವುದೇ ತೊಂದೆರೆಯಾಗಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಪಿಎಸ್​​ಐ ಗಿರಿಧರ್ ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಹಾಸನದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ವರದಿ ನೀಡುತ್ತೇವೆ ಎಂದಿದ್ದಾರೆ.

Last Updated :Sep 17, 2021, 10:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.