ಹಾಸನ: ಪುನೀತ್ ರಾಜ್‌ಕುಮಾರ್​ ಅಭಿಮಾನಿ ಆತ್ಮಹತ್ಯೆ

author img

By

Published : Nov 25, 2021, 2:45 PM IST

puneeth rajkumar fan died

ಹಾಸನದ ಮಯೂರ ನಾಗರಾಜ್ ಎಂಬುವವರು ನಟ ಪುನೀತ್​ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದಿಂದ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಸನ: ನಟ ಪುನೀತ್ ರಾಜ್​ಕುಮಾರ್​ ಅಕಾಲಿಕ ನಿಧನದಿಂದ ನೊಂದು ಹಾಸನದಲ್ಲಿ ವ್ಯಕ್ತಿಯೊಬ್ಬರು ಸಾವಿಗೆ ಶರಣಾಗಿದ್ದಾರೆ.

ಇಲ್ಲಿನ ಡಾ.ರಾಜ್‌ಕುಮಾರ್ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದ ದಿ.ಹಾ.ರಾ.ನಾಗರಾಜ್ ಅವರ ಕಿರಿಯ ಪುತ್ರ ಮಯೂರ ನಾಗರಾಜ್ (34) ಎಂಬವರು ನೇಣಿಗೆ ಶರಣಾಗಿದ್ದಾರೆ.

ಹಾಸನದ ರಾಜ್​ಕುಮಾರ್​ ನಗರದ ನಿವಾಸಿಯಾಗಿರುವ ಮಯೂರ ನಾಗರಾಜ್ ಅವರು ಪುನೀತ್​ ಅವರ ಅಪ್ಪಟ ಅಭಿಮಾನಿಯಂತೆ. ಪುನೀತ್ ನಿಧನದಿಂದ ನಾಗರಾಜ್ ಚಿಂತೆಗೀಡಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆ ಬಳಿಕ, ಸರಿಯಾಗಿ ತಿಂಡಿ-ಊಟವನ್ನೂ ಮಾಡುತ್ತಿರಲಿಲ್ಲ. ಪದೇ ಪದೇ ಅಪ್ಪು ಸಾವಿನ ಬಗ್ಗೆಯೇ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬುಧವಾರ ತಮ್ಮ ಮನೆಯಲ್ಲಿ ತಾಯಿ ಹಾಗೂ ಪತ್ನಿ ಇದ್ದ ವೇಳೆಯೇ ಕೊಠಡಿಗೆ ತೆರಳಿದ ಮಯೂರ ನಾಗರಾಜ್​ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಕಂಡ ಮನೆಯವರು ನೆರೆ ಮನೆಯವರ ಸಹಕಾರದಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಗರದ ಪೆನ್ಸನ್ ಮೊಹಲ್ಲಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.