ಕೃಷಿ ಇಲಾಖೆ ಬೇಜವಾಬ್ದಾರಿತನ ಬಯಲು ಮಾಡಿದ್ದ ಈಟಿವಿ ಭಾರತ್​​: ಎರಡು ತಾಲೂಕಿನ ರೈತರಿಗೆ ನ್ಯಾಯ

author img

By

Published : Sep 21, 2022, 8:32 PM IST

ನೆಲಕಚ್ಚಿದ ಬೆಳೆ

ಕಲಘಟಗಿ ಹಾಗೂ ಅಳ್ನಾವರ ತಾಲೂಕನ್ನು ಕೈಬಿಟ್ಟ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಈಟಿವಿ ಭಾರತ್​ ಬಯಲು ಮಾಡಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೇ ಕೃಷಿ ಇಲಾಖೆ ಎಚ್ಚೆತ್ತುಕೊಂಡಿದೆ.

ಹುಬ್ಬಳ್ಳಿ: ಧಾರವಾಡದ ಕೃಷಿ ಇಲಾಖೆಯ ಅಧಿಕಾರಿಗಳ ಮಹಾ ಎಡವಟ್ಟು ಬಯಲು ಮಾಡಿದ್ದ ಈಟಿವಿ ಭಾರತ್​ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ಪರಿಹಾರ ಡಾಟಾ ಎಂಟ್ರಿ ರಿಪೋರ್ಟ್‌ನಲ್ಲಿ ಎರಡೂ ತಾಲೂಕುಗಳನ್ನೇ ಕೃಷಿ ಅಧಿಕಾರಿಗಳು ಕೈಬಿಟ್ಟಿದ್ದರು. ಈ ಬಗ್ಗೆ ಈಟಿವಿ ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೃಷಿ ಇಲಾಖೆಯು ಎರಡು ತಾಲೂಕಿನ ಹೆಸರನ್ನು ಸೇರ್ಪಡೆ ಮಾಡಿದೆ.

ಎರಡು ತಾಲೂಕುಗಳು ಸೇರ್ಪಡೆ
ಎರಡು ತಾಲೂಕುಗಳು ಸೇರ್ಪಡೆ

ಹೌದು, ಅಧಿಕಾರಿಗಳ ನಡೆಯಿಂದ ಅನ್ನದಾತ ಹಿಡಿಶಾಪ ಹಾಕುವಂತಾಗಿತ್ತು. ಪರಿಹಾರ ಡಾಟಾ ಎಂಟ್ರಿ ಪ್ರೋಗ್ರೇಸ್ ರಿಪೋರ್ಟ್ ಲಭ್ಯವಾಗಿತ್ತು. ಈ ರಿಪೋರ್ಟ್‌ನಲ್ಲಿ ಕಲಘಟಗಿ ಹಾಗೂ ಅಳ್ನಾವರ ತಾಲೂಕನ್ನು ಕೈಬಿಟ್ಟ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಈಟಿವಿ ಬಯಲು ಮಾಡಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೇ ಕೃಷಿ ಇಲಾಖೆ ಎಚ್ಚೆತ್ತುಕೊಂಡಿದೆ.

ನೆಲಕಚ್ಚಿದ ಬೆಳೆ
ಎರಡು ತಾಲೂಕುಗಳು ಸೇರ್ಪಡೆ
ಎರಡು ತಾಲೂಕುಗಳು ಸೇರ್ಪಡೆ

ಧಾರವಾಡ ಜಿಲ್ಲೆಯಲ್ಲಿ ಒಟ್ಟು ಏಳು ತಾಲೂಕುಗಳಿವೆ. ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಅಣ್ಣಿಗೇರಿ ಕಲಘಟಗಿ ಹಾಗೂ ಅಳ್ನಾವರ ಈ ತಾಲೂಕುಗಳು ಧಾರವಾಡ ಜಿಲ್ಲೆಯಲ್ಲಿವೆ. ಆದರೆ ಸಿಕ್ಕ ದಾಖಲೆಯಲ್ಲಿ ಕಲಘಟಗಿ ಮತ್ತು ಅಳ್ನಾವರ ಎರಡೂ ತಾಲೂಕುಗಳು ನಾಪತ್ತೆ‌ಯಾಗಿದ್ದವು. ಈ ಕುರಿತು ವರದಿ ಮಾಡಿದ್ದು, ಮಾತ್ರವಲ್ಲದೇ ಇಲಾಖೆಯ ಸಚಿವರ ಗಮನಕ್ಕೆ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಎರಡು ತಾಲೂಕಿನ ಅನ್ನದಾತರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಿದೆ.

ಓದಿ: ಕೃಷಿ ಇಲಾಖೆ ಬೇಜವಾಬ್ದಾರಿತನ.. ಎರಡು ತಾಲೂಕು ಕೈಬಿಟ್ಟ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.