ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವಿಗೆ ಸುಪ್ರೀಂ ಸಿಗ್ನಲ್ : ವಾಣಿಜ್ಯನಗರಿಯ ದೈವ ನಿಷ್ಠರಲ್ಲಿ ಆತಂಕ

author img

By

Published : Sep 14, 2021, 5:56 PM IST

Updated : Sep 14, 2021, 7:13 PM IST

Supreme Court orders eviction of unauthorized temples and chapels

ಪುರಾತನ ಕಾಲದ ಶಂಭುಲಿಂಗ ಗುಡಿಯನ್ನು ಬಿಆರ್ಟಿಎಸ್ ಮೇಲ್ಸೇತುವೆ ಕಾಮಗಾರಿ ಸಮಯದಲ್ಲಿಯೂ ತೆರವುಗೊಳ್ಳದ ಗುಡಿ, ಈಗ ಸುಪ್ರೀಂಕೋರ್ಟ್ ಆದೇಶದಿಂದ ತೆರವುಗೊಳ್ಳಲಿದೆಯಾ ಎಂಬ ಆತಂಕ ಜನರಲ್ಲಿ‌ದೆ..

ಹುಬ್ಬಳ್ಳಿ : ಅನಧಿಕೃತ ಪ್ರಾರ್ಥನಾ ಮಂದಿರ ತೆರವುಗೊಳಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ‌ಅವಳಿನಗರದ ಭಕ್ತರಲ್ಲಿ ಆತಂಕ ಶುರುವಾಗಿದೆ.

ಧಾರವಾಡ ಜಿಲ್ಲೆಯಲ್ಲಿ 324 ಮಂದಿರ, ಮಸೀದಿ ತೆರವುಗೊಳಿಸಲು ಆದೇಶ ನೀಡಲಾಗಿದೆ. ಈಗಾಗಲೇ 43 ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಇನ್ನೂ 281 ಅನಧಿಕೃತವಾಗಿರುವ ಧಾರ್ಮಿಕ ಕಟ್ಟಡ ತೆರವುಗೊಳಿಸುವುದೇ ಸವಾಲಾಗಿದೆ.

ಹುಬ್ಬಳ್ಳಿ-ಧಾರವಾಡದ ದೇವಾಲಯಗಳು

ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ ಇರುವ ಶ್ರೀ ರಾಮಲಿಂಗೇಶ್ವರ ದೇವಾಲಯದ ಭಕ್ತರಲ್ಲಿ ಆತಂಕ ಎದುರಾಗಿದೆ. ಪುರಾತನ ಕಾಲದ ಶಂಭುಲಿಂಗ ಗುಡಿಯನ್ನು ಬಿಆರ್ಟಿಎಸ್ ಮೇಲ್ಸೇತುವೆ ಕಾಮಗಾರಿ ಸಮಯದಲ್ಲಿಯೂ ತೆರವುಗೊಳ್ಳದ ಗುಡಿ, ಈಗ ಸುಪ್ರೀಂಕೋರ್ಟ್ ಆದೇಶದಿಂದ ತೆರವುಗೊಳ್ಳಲಿದೆಯಾ ಎಂಬ ಆತಂಕ ಜನರಲ್ಲಿ‌ದೆ.

ಇದನ್ನೂ ಓದಿ:ದೇಗುಲ ಕೆಡವಿದ ವಿಚಾರ.. ವಿವಿಧ ಪಕ್ಷಗಳ ನಾಯಕರ ಪ್ರತಿಕ್ರಿಯೆ ಹೀಗಿವೆ..

ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ದೇವಸ್ಥಾನ ತೆರವಿನ ಬಗ್ಗೆ ಆಡಳಿತ ಮಂಡಳಿಯಿಂದ ಚರ್ಚೆ ನಡೆಸಲಾಗುತ್ತದೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

Last Updated :Sep 14, 2021, 7:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.