ಹುಬ್ಬಳ್ಳಿ: ಹಲ್ಲೆ ಮಾಡಿ ಹಣ, ಮೊಬೈಲ್ ದೋಚುತ್ತಿದ್ದ 6 ಜನರ ಬಂಧನ

author img

By

Published : Sep 26, 2021, 5:33 PM IST

ಹಣ,ಮೊಬೈಲ್ ದೋಚುತ್ತಿದ್ದ 6 ಜನರ ಬಂಧನ

ದುಷ್ಕರ್ಮಿಗಳು ಯುವಕನನ್ನು ಕೈಸನ್ನೆ ಮಾಡಿ ಹೊರವಲಯಕ್ಕೆ ಕರೆದುಕೊಂಡು ಹೋಗಿ 17 ಸಾವಿರ ರೂ ಮೌಲ್ಯದ ಮೊಬೈಲ್ ಹಾಗೂ 5 ಸಾವಿರ ರೂ ನಗದು ದೋಚಿದ್ದರು‌.

ಹುಬ್ಬಳ್ಳಿ: ವೇಶ್ಯಾವಾಟಿಕೆ ಹೆಸರಲ್ಲಿ ಗಿರಾಕಿಗಳನ್ನು ನಗರದ ಹೊರವಲಯಕ್ಕೆ ಕರೆದೊಯ್ದು ಹಲ್ಲೆ ಮಾಡಿ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ 6 ಜನರ ತಂಡವನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಗೋಕುಲ್​​ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ದಿನಗಳಿಂದ ದುಷ್ಕರ್ಮಿಗಳು ಯುವಕನನ್ನು ಕೈಸನ್ನೆ ಮಾಡಿ ಹೊರವಲಯಕ್ಕೆ ಕರೆದುಕೊಂಡು ಹೋಗಿ 17 ಸಾವಿರ ರೂ ಮೌಲ್ಯದ ಮೊಬೈಲ್ ಹಾಗೂ 5 ಸಾವಿರ ರೂ ನಗದು ದೋಚಿದ್ದರು‌. ಈ ಪ್ರಕರಣದಲ್ಲಿ ವೆಂಕಟೇಶ, ಗೀತಾ ಹಾಗೂ ಒಬ್ಬ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ‌ಇನ್ನೊಬ್ಬ ಆರೋಪಿ ಶಬೀರ ಎಂಬಾತನ ಪತ್ತೆಗೆ ಬಲೆ ಬೀಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ತಾರಿಹಾಳ ವಾಜಪೇಯಿ ನಗರದ ಗಣೇಶ ಪರಶುರಾಮ ಬಿಲಾನಾ, ಚನ್ನವ್ವ ಲಕ್ಷಣ ವಡ್ಡರ ಹಾಗೂ ಹಳೇಹುಬ್ಬಳ್ಳಿ ಆನಂದ ನಗರದ ಸಮೀರ ರಸೂಲಸಾಬ್ ಮಕಾನದಾರ ಎಂಬುವರನ್ನು ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಹಾಗೂ ಸಿಬ್ಬಂದಿ ಬಂಧಿಸಿ ಅವರಿಂದ 2 ಬೈಕ್ ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.