ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗುತ್ತೆ ಅನ್ನೋದು ಊಹಾಪೋಹ: ಸಚಿವ ಸುನಿಲ್ ಕುಮಾರ್

author img

By

Published : Oct 12, 2021, 10:56 AM IST

sunil kumar

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಲ್ಲಿದ್ದಲು, ವಿದ್ಯುತ್‌ ಅಭಾವ ಉಂಟಾಗಲ್ಲ. ಕಲ್ಲಿದ್ದಲಿನ ಕೊರತೆ ಎಲ್ಲಾ ಊಹಾಪೋಹ ಎಂದು ಸುನಿಲ್ ಕುಮಾರ್​​ ಹೇಳಿದ್ದಾರೆ.

ದಾವಣಗೆರೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಮತ್ತು ಕಲ್ಲಿದ್ದಲು ಅಭಾವ ಉಂಟಾಗುವುದಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗುತ್ತೆ ಅನ್ನೋದು ಊಹಾಪೋಹ: ಸಚಿವ ಸುನಿಲ್ ಕುಮಾರ್

ನರದ ಜಿಎಂಐಟಿ ಗೆಸ್ಟ್​ ಹೌಸ್ ಬಳಿ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗದಂತೆ ಎಲ್ಲ ರೀತಿಯ ಎಚ್ಚರಿಕೆವಹಿಸಲಾಗಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗುತ್ತೆ ಅನ್ನೋದು ಊಹಾಪೋಹ. ರಾಯಚೂರು-ಬಳ್ಳಾರಿ ಘಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಇಲ್ಲ. ಕೇಂದ್ರ ಸರ್ಕಾರ 8 ರೇಕ್ಸ್ ಕಲ್ಲಿದ್ದಲು ಕಳುಹಿಸಿ ಕೊಟ್ಟಿದೆ. ನವೆಂಬರ್ ಅಂತ್ಯದಲ್ಲಿ ಇನ್ನೆರಡು ರೇಕ್ಸ್ ಹೆಚ್ಚು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಸುನೀಲ್​ ಕುಮಾರ್ ತಿಳಿಸಿದರು.

ಉಪ ಚುನಾವಣೆಯಲ್ಲಿ ನಾವೇ ಗೆಲ್ಲೋದು

ಇನ್ನು ರಾಜ್ಯದಲ್ಲಿ ಘೋಷಣೆಯಾಗಿರುವ ಬೈ ಎಲೆಕ್ಷನ್​ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಉಪಚುನಾವಣೆ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯ ಫಲಿತಾಂಶದ ಆಧಾರವಿಟ್ಟುಕೊಂಟು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಜಯ ಸಾಧಿಸುತ್ತೇವೆ ಎಂದರು. ಹಾನಗಲ್​, ಸಿಂದಗಿ ಉಪ ಚುನಾವಣೆಗಳು 2023ರ ಚುನಾವಣೆಯ ದಿಕ್ಸೂಚಿ ಆಗಲಿವೆ ಎಂದಿದ್ದಾರೆ.

ಇದನ್ನೂ ಓದಿ: ಕಲ್ಲಿದ್ದಲು ಕೊರತೆ: ಆರ್​ಟಿಪಿಎಸ್​ನ ಐದು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.