ಅರಣ್ಯಾಧಿಕಾರಿಗಳ ದಾಳಿ : 4.5 ಲಕ್ಷ ಮೌಲ್ಯದ ಮರದ ದಿಮ್ಮಿಗಳು ವಶ, ಮೂವರ ಬಂಧನ

author img

By

Published : Jul 31, 2022, 4:57 PM IST

the-forest-officers-arrested-the-accused-who-were-transporting-illegal-timber-in-sulya

ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಖದೀಮರು- ಅರಣ್ಯಾಧಿಕಾರಿಗಳ ಕಾರ್ಯಾಚರಣೆ- ಸುಳ್ಯ ತಾಲೂಕಿನಲ್ಲಿ ಆರೋಪಿಗಳ ಬಂಧನ

ಸುಳ್ಯ (ದಕ್ಷಿಣ ಕನ್ನಡ) : ಇಲ್ಲಿನ ಅಜ್ಜಾವರ ಗ್ರಾಮ‌ ವ್ಯಾಪ್ತಿಯ ಮುಳ್ಯಕಜೆ ಎಂಬಲ್ಲಿ ಅಕ್ರಮವಾಗಿ ಹಲಸು ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ರಾತ್ರಿ ಗಸ್ತು ತಿರುಗುತ್ತಿದ್ದ ಸುಳ್ಯ ವಲಯದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನ ಹಾಗೂ ಮೂವರನ್ನು ಬಂಧಿಸಿದ್ದು, ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಂಧಿತರಿಂದ ವಾಹನ ಸೇರಿ ಒಟ್ಟು 4.5 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಅಡ್ಕಾರು ನಿವಾಸಿ ಮೊಹಮ್ಮದ್ ಮಜೀದ್ ನಡುವಡ್ಕ‌ಮನೆ ಹಾಗೂ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ವಾಹನ ಚಾಲಕರಾದ ಮೊಹಮ್ಮದ್ ಶಫೀಕ್, ಇಬ್ರಾಹಿಂ ಭಾತೀಷ ಹಾಗೂ ಸುಂದರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

the-forest-officers-arrested-the-accused-who-were-transporting-illegal-timber-in-sulya
ವಶಪಡಿಸಿಕೊಂಡ ಮರದ ದಿಮ್ಮಿಗಳು

ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿಯವರ ಮಾರ್ಗದರ್ಶನದಂತೆ ವಲಯ ಅರಣ್ಯಾಧಿಕಾರಿಯಾದ ಗಿರೀಶ್ ಅವರು ತನಿಖೆಯನ್ನು ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾದ ಯಶೋಧರ್, ಅರಣ್ಯ ರಕ್ಷಕರಾದ ದೇವಿ ಪ್ರಸಾದ್, ದೀವೀಶ್, ನಿಂಗಪ್ಪ ಕೊಪ್ಪ ಹಾಗೂ ಅರಣ್ಯ ವೀಕ್ಷಕರಾದ ಗಂಗಾಧರ ಮತ್ತಿತರರು ಪಾಲ್ಗೊಂಡಿದ್ದರು.

ಓದಿ : ಶಾಲೆಗೆ ರಜೆ ಎಂದು ಜಮೀನಿಗೆ ತೆರಳಿದ ಮಕ್ಕಳು.. ಕೃಷಿ ಹೊಂಡದಲ್ಲಿ ಮುಳುಗಿ ಐವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.