ಮುರುಘಾಮಠದ ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

author img

By

Published : Aug 27, 2022, 6:24 PM IST

Updated : Aug 27, 2022, 9:39 PM IST

complaint-against-sk-basavarajan-in-chitradurga

ಮುರುಘಾಮಠದ ಆಡಳಿತಾಧಿಕಾರಿ ಎಸ್​.ಕೆ. ಬಸವರಾಜನ್​ ಎಂಬುವರು ಅಲ್ಲಿನ ಮಹಿಳಾ ನಿಲಯ ಪಾಲಕರ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ಜಿಲ್ಲೆಯ ಮುರುಘಾಮಠದ ಆಡಳಿತಾಧಿಕಾರಿ ಎಸ್​.ಕೆ. ಬಸವರಾಜನ್​ ಎಂಬುವರು ಅಲ್ಲಿನ ಮಹಿಳಾ ನಿಲಯ ಪಾಲಕರ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್​ಪಿ ಡಾ. ಕೆ.ಪರಶುರಾಮ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎಸ್​ಪಿ, ಜುಲೈ 24ರಂದು ಇಬ್ಬರು ಬಾಲಕಿಯರು ಮುರುಘಾಮಠದ ವಸತಿ ನಿಲಯದಿಂದ ಗೇಟ್​ಪಾಸ್​ ಪಡೆದು ಹೊರಗೆ ತೆರಳಿದ್ದರು. ಬಳಿಕ ಅವರಿಬ್ಬರೂ ಬೆಂಗಳೂರಿನ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಕಂಡುಬಂದಿದ್ದರು. ಆಗ ಅಲ್ಲಿನ ಪೊಲೀಸರು ಮಠಕ್ಕೆ ಈ ಬಗ್ಗೆ ಆಡಳಿತಾಧಿಕಾರಿ ಎಸ್​.ಕೆ. ಬಸವರಾಜನ್ ಅವರಿಗೆ ಮಾಹಿತಿ ನೀಡಿದ್ದರು ಎಂದು ಎಸ್​ಪಿ ಹೇಳಿದ್ದಾರೆ.

ಆದರೆ ಬಸವರಾಜನ್ ಹಾಗೂ ಆವರ ಪತ್ನಿ ಮರುದಿನ ಬಾಲಕಿಯರನ್ನು ಪೊಲೀಸ್​ ಠಾಣೆಯಿಂದ ಕರೆತಂದಿದ್ದು, ಬಳಿಕ ಅಪ್ರಾಪ್ತೆಯರನ್ನು ಪೋಷಕರು ಹಾಗೂ ವಸತಿ ನಿಲಯಕ್ಕೆ ಒಪ್ಪಿಸದೆ ತಮ್ಮ ವಶದಲ್ಲೇ ಇಟ್ಟುಕೊಂಡಿದ್ದರು ಎಂದು ದೂರಲಾಗಿದೆ.

ಲೈಂಗಿಕ ದೌರ್ಜನ್ಯ ಆರೋಪ.. ಪ್ರಕರಣ ಕುರಿತು ಎಸ್​ಪಿ ಮಾಹಿತಿ

ಅಲ್ಲದೆ, ಬಸವರಾಜನ್​ ಅವರು ಮಹಿಳಾ ನಿಲಯದ ಪಾಲಕರೊಂದಿಗೆ ಅಶ್ಲೀಲವಾಗಿ ಮಾತನಾಡುವುದಲ್ಲದೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ. ದೂರಿನ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್​ಪಿ ಡಾ. ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಂಬಂಧಿಕನಿಂದಲೇ ಯುವತಿಗೆ ಲೈಂಗಿಕ ಕಿರುಕುಳ: ಸಿಡಿಪಿಒರಿಂದ ಸಂತ್ರಸ್ತೆ ರಕ್ಷಣೆ

Last Updated :Aug 27, 2022, 9:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.