ಚಿಕ್ಕಮಗಳೂರು : ಬಾರ್ ಮುಚ್ಚುವಂತೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

author img

By

Published : Sep 19, 2021, 4:27 PM IST

Villagers are protested to close bar

ಈ ಭಾಗದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರಿದ್ದು, ಎಮ್ಮೆದೊಡ್ಡಿ ಸುತ್ತಮುತ್ತ ಯಾವುದೇ ಬಾರ್ ಇರಲಿಲ್ಲ. ವಾರಕ್ಕೊಮ್ಮೆ ಸಂತೆಗೆಂದು ಕಡೂರಿಗೆ ಹೋದಾಗ ಕುಡಿದು ಬರುತ್ತಿದ್ದರು. ಈಗ ಇಲ್ಲೇ ಬಾರ್ ಆರಂಭವಾಗಿರೋದ್ರಿಂದ ದಿನ ಕುಡಿಯಲು ಆರಂಭಿಸುತ್ತಾರೆ..

ಚಿಕ್ಕಮಗಳೂರು : ಹೊಸದಾಗಿ ಆರಂಭವಾಗಿರುವ ಬಾರ್ ಮುಚ್ಚಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಬಾರ್ ಮುಚ್ಚುವಂತೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದಲ್ಲಿ ನಿನ್ನೆ ಹೊಸದಾಗಿ ಬಾರ್​​ ಪ್ರಾರಂಭಿಸಲಾಗಿದೆ. ಅಷ್ಟೇ ಅಲ್ಲ, ಅದೇ ಮಾರ್ಗವಾಗಿ ಶಾಲೆ ಕೂಡ ಇದೆ. ಇದರಿಂದ ಸುತ್ತಮುತ್ತಲಿನ 20 ಹಳ್ಳಿಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟಿಸುತ್ತಿದ್ದಾರೆ.

ಈ ಭಾಗದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರಿದ್ದು, ಎಮ್ಮೆದೊಡ್ಡಿ ಸುತ್ತಮುತ್ತ ಯಾವುದೇ ಬಾರ್ ಇರಲಿಲ್ಲ. ವಾರಕ್ಕೊಮ್ಮೆ ಸಂತೆಗೆಂದು ಕಡೂರಿಗೆ ಹೋದಾಗ ಕುಡಿದು ಬರುತ್ತಿದ್ದರು. ಈಗ ಇಲ್ಲೇ ಬಾರ್ ಆರಂಭವಾಗಿರೋದ್ರಿಂದ ದಿನ ಕುಡಿಯಲು ಆರಂಭಿಸುತ್ತಾರೆ. ದುಡಿದದ್ದನ್ನೆಲ್ಲ ಬಾರ್​ಗೆ ಹಾಕಿದರೆ ಹೆಂಡತಿ-ಮಕ್ಕಳ ಹೊಟ್ಟೆ ತುಂಬೋದು ಹೇಗೆಂದು ಆಕ್ರೋಶ ಹೊರ ಹಾಕಿದರು.

ಓದಿ: ಅಧಿವೇಶನದ ಬಳಿಕ 1-5ನೇ ತರಗತಿ ಪುನಾರಂಭ ಕುರಿತು ಅಂತಿಮ ನಿರ್ಧಾರ: ಸಚಿವ ಬಿ.ಸಿ.ನಾಗೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.