ಹೌದೋ ಹುಲಿಯಾ ರೀತಿ ಸಿದ್ರಾಮುಲ್ಲಾ ಖಾನ್ ಎಂಬುದು ಅವರಿಗೆ ಕೊಟ್ಟ ಬಿರುದು: ಸಿ ಟಿ ರವಿ

author img

By

Published : Dec 5, 2022, 6:49 AM IST

Etv Bharat

ಬಿ ಎಸ್​ ಯಡಿಯೂರಪ್ಪ ಅವರಿಗೆ ರಾಜಹುಲಿ, ಸಿದ್ದರಾಮಯ್ಯಗೆ ಹೌದೋ ಹುಲಿಯಾ ಎಂದು ಹೇಗೆ ಬಿರುದು ಇದೆಯೋ ಹಾಗೇ ಈ ಸಿದ್ರಾಮುಲ್ಲಾ ಖಾನ್ ಕೂಡ ಎಂದು ಸಿ ಟಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರು: ಸಿದ್ರಾಮುಲ್ಲಾ ಖಾನ್ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಮೈ ಉರಿ ಹತ್ತಿದೆ. ಹೀಗೆ ಉರಿ ಹತ್ತುತ್ತೆ ಎಂದು ಗೊತ್ತಿದ್ರೆ 10 ವರ್ಷ ಮೊದಲೇ ಹೇಳುತ್ತಿದ್ದೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

ನೀವು ಪ್ರಧಾನಿಗೆ ಕೊಲೆ ಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದು ಕರೆದಿದ್ದೀರಿ. ಸಿದ್ರಾಮುಲ್ಲಾ ಖಾನ್ ಅನ್ನೋದು ಬೈಗುಳವಾ. ಅದು ಬೈಗುಳ ಅಲ್ಲಾ. ನಿಮಗೆ ಉರಿ ಹತ್ತಿದ್ಯಾಕೆ? ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದು ಎಂದು ತಿರುಗೇಟು ಕೊಟ್ಟಿದ್ದಾರೆ.

ಸಿದ್ರಾಮುಲ್ಲಾ ಖಾನ್ ಎಂಬುದು ಅವರಿಗೆ ಕೊಟ್ಟ ಬಿರುದು- ಸಿ ಟಿ ರವಿ

ಬಿ.ಎಸ್.ವೈ ಅವರನ್ನು ರಾಜಾಹುಲಿ ಅಂತಾರೆ, ಸಿದ್ದುನ ಹುಲಿಯಾ ಅಂದ್ರು. ಇದು ಹಾಗೇ ಒಂದು ಬಿರುದು. ಹಿಂದೂಗಳಿಗೆ ಅನ್ಯಾಯ ಮಾಡಿದ್ದ ಟಿಪ್ಪು ಪರ ಇದ್ದಿದ್ದಕ್ಕೆ ಈ ಬಿರುದು ನೀಡಲಾಗಿದೆ ಎಂದರು.

ಇದನ್ನೂ ಓದಿ: ಸಿ ಟಿ ರವಿ ವಿರುದ್ಧ ನಾವು ಪ್ರತಿಭಟನೆ ಆರಂಭಿಸಿದರೆ ಮನೆಯಿಂದ ಹೊರ ಬರಲೂ ಸಾಧ್ಯವಾಗಲ್ಲ: ಎಂ ಬಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.