ಚಿಕ್ಕಮಗಳೂರು : ತಾಯಿ ನಮ್ಮವ್ವ, ರಮೇಶ್-ಮಂಜುಳ ತಮ್ಮ ಸಂಬಳವನ್ನು ರಾಜಮ್ಮನ ಕೈಗೆ ಕೊಡಲಿ.ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು. ಐಶ್ವರ್ಯ ಬೇಗ ದಪ್ಪ ಆಗಿ,ಪುಷ್ಠಿಯಾಗಿ ಕಾಣುವಂತೆ ಮಾಡು. ಇದು ಉಕ್ಕಡದ ಮಾರಮ್ಮನಿಗೆ ಭಕ್ತರೊಬ್ಬರು ಬರೆದಿರುವ ಪತ್ರ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರೋ ಕಳಸೇಶ್ವರ ಸ್ವಾಮಿಯ ದೇವಸ್ಥಾನದಲ್ಲಿರುವ ಉಕ್ಕಡ ಮಾರಮ್ಮನ ಗುಡಿಯಲ್ಲಿರುವ ಕಾಣಿಕೆ ಹುಂಡಿಯಲ್ಲಿ ಈ ಪತ್ರ ಪತ್ತೆಯಾಗಿದೆ. ಅದರಲ್ಲಿ ಭಕ್ತರೊಬ್ಬರು ಮಾರಮ್ಮ ದೇವಿಯ ಬಳಿ ತಮ್ಮ ಕಷ್ಟಗಳನ್ನು ದೂರಮಾಡು ಮನೆಯವರಿಗೆ ಒಳ್ಳೆಯ ಕೆಲಸ ಕೊಡಿಸು, ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನಡೆಯುವ ಹಾಗೆ ಮಾಡು ದೇವರೇ ಎಂದು ಮಾರಮ್ಮನಿಗೆ ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ.
ಪತ್ರದಲ್ಲಿ ತಾಯಿ ನಮ್ಮವ್ವ, ರಮೇಶ್- ಮಂಜುಳ ಸಂಬಳವನ್ನು ರಾಜಮ್ಮನ ಕೈಗೆ ಕೊಡಲಿ, ನನ್ನ ಮದುವೆ ಯಾವುದೇ ವಿಘ್ನವಿಲ್ಲದೇ ನೆರವೇರುವಂತೆ ಮಾಡು, ಮಂಜುಳ ಅತ್ತೆ - ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು, ಮಂಜುಳಾ ಮನಸ್ಸಿನಲ್ಲಿ ರಾಜಮ್ಮ, ಬಸವರಾಜುನನ್ನು ಒಳ್ಳೆಯವರಾಗಿಸು, ದೇವರಾಜುಗೆ ಕೈ ತುಂಬಾ ಸಂಬಳ ಸಿಗುವ ಸರ್ಕಾರಿ ಕೆಲಸ ಕೊಡಿಸು, ಎಂದು ದೇವರಿಗೆ ವಿಚಿತ್ರವಾಗಿ ಪತ್ರ ಬರೆದು ಭಕ್ತ ಬೇಡಿ ಕೊಂಡಿದ್ದಾನೆ. ಸದ್ಯ ಈ ಪತ್ರ ಎಲ್ಲಡೆ ವೈರಲ್ ಆಗಿದೆ.
ಇದನ್ನೂ ಓದಿ : 10ನೇ ತರಗತಿ ಬಾಲಕನ ಮತಾಂತರ ಯತ್ನ?