ಗೋಲ್ಡ್ ರಿಕವರಿ ಹೆಸರಿನಲ್ಲಿ ಕಿರುಕುಳ ಆರೋಪ: ತಮಿಳುನಾಡು ಪೊಲೀಸರನ್ನು ಕೂಡಿಹಾಕಿದ ಸ್ಥಳೀಯರು

author img

By

Published : Sep 21, 2022, 9:21 PM IST

tamil-nadu-police-were-locked-by-locals

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆಗಮಿಸುವಂತೆ ಕಿರುಕುಳ ನೀಡಿದ್ದಕ್ಕೆ ಸ್ಥಳೀಯರು ತಮಿಳುನಾಡು ಪೊಲೀಸರನ್ನು ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳನ್ನು ಕೂಡಿ ಹಾಕಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ : ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿರುವ ಚಿನ್ನದಂಗಡಿಗೆ ಬಂದು ಸಂಬಂಧಪಡದ ವ್ಯಕ್ತಿಯನ್ನು ವಿಚಾರಣೆಗೆ ಹಾಜರಾಗುವಂತೆ ಕಿರುಕುಳ ನೀಡಿದ್ದಕ್ಕೆ ಸ್ಥಳೀಯರು ಇಬ್ಬರು ಪೊಲೀಸರು ಹಾಗೂ ಖಾಸಗಿ ವ್ಯಕ್ತಿಯನ್ನು ಕೂಡಿ ಹಾಕಿರುವ ಘಟನೆ ನಡೆದಿದೆ.

ತಮಿಳುನಾಡಿನ ಪರತ್ತೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಮಣಿ, ಹೆಡ್ ಕಾನ್ಸ್​ಟೇಬಲ್​ ವಾಸುದೇವ್ ಅವರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳನನ್ನು ಕರೆದುಕೊಂಡು, ಜೊತೆಗೆ ಕನ್ನಡ ಭಾಷೆ ಬಲ್ಲ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಚಿಕ್ಕಬಳ್ಳಾಪುರದ ಚಿನ್ನದಂಗಡಿ ಮಾಲಿಕ ಅಥುಲ್ ನನ್ನು ಹುಡುಕಿಕೊಂಡು ಬಂದಿದ್ದಾರೆ.

ತಮಿಳುನಾಡು ಪೊಲೀಸರಿಂದ ಕಿರುಕುಳ ಆರೋಪ : ಆದರೆ, ಈ ಹಿಂದೆ ಹಲವು ಚಿನ್ನಾಭರಣ ಕಳವು ಪ್ರಕರಣಗಳಲ್ಲಿ ಇದೇ ರೀತಿ ಪೊಲೀಸರು ಹಲವು ಬಾರಿ ಬಂದು ಕಿರುಕುಳ ನೀಡಿದ್ದಕ್ಕೆ ನಷ್ಟ ಉಂಟಾಗಿ ಹಲವು ತಿಂಗಳ ಹಿಂದೆ ಅಥುಲ್ ಅಂಗಡಿ ಮಾರಿಬಿಟ್ಟು ಊರು ತೊರೆದಿದ್ದ. ಆದರೆ ಪೊಲೀಸರು ಆತನ ಮಾವ ಶ್ರೀನಿವಾಸರನ್ನು ಹಿಡಿದುಕೊಂಡು ವಿಚಾರಣೆಗೆ ಬರುವಂತೆ ಧಮ್ಕಿ ಹಾಕಿದ್ದರಂತೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯರು ಪೊಲೀಸರನ್ನು ಯಾಕೆ ಕರೆದುಕೊಂಡು ಬಂದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅನುಮಾನಗೊಂಡ ಸ್ಥಳೀಯರು, ನಕಲಿ ಪೊಲೀಸರು ಎಂದು ಅನುಮಾನ ವ್ಯಕ್ತಪಡಿಸಿ ಐದು ಜನರನ್ನು ಕೂಡಿ ಹಾಕಿ ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.‌

ಇನ್ನೂ‌ ಮಾಹಿತಿ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಸರ್ಕಲ್ ಇನ್ಸ್‌ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಐದು ಜನರನ್ನು ವಶಕ್ಕೆ ಪಡೆದುಕೊಂಡಿದ್ದು ಅದರಲ್ಲಿ ಇಬ್ಬರು ಮಾತ್ರ ಪೊಲೀಸರಾಗಿದ್ದು ಇನ್ನುಳಿದವರು ಖಾಸಗಿ ವ್ಯಕ್ತಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ರಾಯಚೂರಲ್ಲಿ ಯುವಕನ ಬರ್ಬರ ಕೊಲೆ: ರಕ್ತಸಿಕ್ತ ಮೃತದೇಹ ಕಂಡು ಬೆಚ್ಚಿಬಿದ್ದ ಜನರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.