ಮದ್ಯಪಾನ ಮಾಡಿ ಓವರ್​ಸ್ಪೀಡ್: ಬಸ್​ ಚಾಲಕನಿಗೆ ಥಳಿಸಿದ ಪ್ರಯಾಣಿಕರು..

author img

By

Published : Sep 24, 2021, 1:48 AM IST

Updated : Sep 24, 2021, 3:34 AM IST

passengers-beaten-bus-driver-for-over-speed-in-chikkaballapur

ಕಳೆದ 10 ದಿನಗಳ ಹಿಂದೆಯಷ್ಟೇ ಭೀಕರ ರಸ್ತೆ ಅಫಘಾತದಲ್ಲಿ 8 ಜನ ಪ್ರಯಾಣಿಕರು ದಾರುಣ ಸಾವನ್ನಪ್ಪಿದ್ದು, ಈಗ ಖಾಸಗಿ ಚಾಲಕನ ದುರ್ನಡತೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ: ಖಾಸಗಿ ಬಸ್ ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರೇ ಬಸ್ ನಿಲ್ಲಿಸಿ, ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಬಳಿ ನಡೆದಿದೆ.

ಚಿಂತಾಮಣಿ ನಗರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಚಾಮುಂಡೇಶ್ವರಿ ಟ್ರಾವೆಲ್ಸ್​​ಗೆ ಸೇರಿದ ಬಸ್ ಚಾಲಕ ಅತೀ ವೇಗದಿಂದ ಬಸ್ ಚಲಾಯಿಸಿದ್ದು, ನಿಧಾನವಾಗಿ ವಾಹನವನ್ನು ಚಲಾಯಿಸುವಂತೆ ಬಸ್​​ನಲ್ಲಿದ್ದ ಪ್ರಯಾಣಿಕರು ಸೂಚಿಸಿದ್ದಾರೆ.

ಆದರೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಚಾಲಕ ಅತಿ ವೇಗದಿಂದ ಬಸ್ ಚಲಾಯಿಸಿದ್ದು, ಈ ವೇಳೆ ಬಸ್‌ನಲ್ಲಿದ್ದ ಓರ್ವ ಮಹಿಳೆ ಕುಸಿದು ಬಿದ್ದಿದ್ದಾರೆ. ಕೋಪಗೊಂಡ ಪ್ರಯಾಣಿಕರು ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವುದಾಗಿ ಅವಮಾನಿಸಿ, ಚಿಂತಾಮಣಿ ನಗರದ ಹೊರವಲಯದಲ್ಲಿರುವ ಚಿನ್ನಸಂದ್ರ ಬಳಿ ಬಸ್ ತಡೆದು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಸ್​ ಚಾಲಕನಿಗೆ ಥಳಿಸಿದ ಪ್ರಯಾಣಿಕರು

ತಾಲೂಕಿನಲ್ಲಿ ಕಳೆದ 10 ದಿನಗಳ ಹಿಂದೆಯಷ್ಟೇ ಭೀಕರ ರಸ್ತೆ ಅಫಘಾತದಲ್ಲಿ 8 ಜನ ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದರು. ಇದರ ಬೆನ್ನಲೇ ಪೊಲೀಸ್ ಇಲಾಖೆ ಹಾಗೂ ಆರ್​​ಟಿಓ ಅಧಿಕಾರಿಗಳು ರಸ್ತೆಗಿಳಿದು ತನಿಖೆಯನ್ನು ಶುರು ಮಾಡಿದ್ದಾರೆ‌. ಆದರೆ ಅಧಿಕಾರಿಗಳ ಕಣ್ಣುತಪ್ಪಿಸಿ ವಾಹನ ಚಾಲಕರು ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಅಧಿಕಾರಿಗಳಿಗೆ ತಲೆ ನೋವಾಗಿದೆ

ಸದ್ಯ ಬಸ್‌ನ ಪ್ರಯಾಣಿಕರು ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಹೆತ್ತ ತಾಯಿಯನ್ನೇ ಮಚ್ಚಿನಿಂದ ಕೊಂದ ಪಾಪಿ ಪುತ್ರ

Last Updated :Sep 24, 2021, 3:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.