ಚಿಕ್ಕಬಳ್ಳಾಪುರ : ತಾಲೂಕಿನ ಕಳವಾರ ಗ್ರಾಮದ ಕಾಶಿ ವಿಶ್ವನಾಥ ಆಚಾರ್ಯ ಅವರು ವೇದ, ಜೋತಿಷ್ಯ, ವಾಸ್ತು ಅಧ್ಯಯನದಲ್ಲಿ ಪರಿಣಿತಿ ಹೊಂದಿದ ಹಿನ್ನೆಲೆ ಏಷಿಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕಾಶಿ ವಿಶ್ವನಾಥ ಆಚಾರ್ಯ ಅವರ ಕುಟುಂಬ ಸುಮಾರು ಮೂರು ತಲೆಮಾರುಗಳಿಂದ ವೇದ, ವೇದಾಂಗಗಳು, ಜ್ಯೋತಿಷ್ಯ , ವಾಸ್ತು ಅಧ್ಯಯನವನ್ನು ನೆರವೇರಿಸುತ್ತಾ ಬಂದಿದೆ. ಬೇರೆ ಬೇರೆ ರಾಷ್ಟ್ರದ ದೇವಾಲಯಗಳಲ್ಲಿ ಪ್ರತಿಷ್ಠಾಪನೆ, ಯಜ್ಞ ಯಾಗಾದಿಗಳನ್ನು ಮಾಡಿದ್ದಾರೆ.
ಆಚಾರ್ಯರು ಗಂಗಾಧರ ಚಾರ್ಯ ಸ್ವಾಮಿಗಳ ಅನುಮತಿಯಿಂದ ವೇದ ವೇದಾಂಗಗಳನ್ನು ಕಲಿತಿದ್ದು, ಸುಮಾರು ವರ್ಷಗಳ ಕಾಲ ವೇದಾಧ್ಯಯನ ಮಾಡಿದ್ದಾರೆ. ಲೋಕ ಕಲ್ಯಾಣಾರ್ಥವಾಗಿ ಜ್ಯೋತಿಷ್ಯ ವಾಸ್ತು ಹಾಗೂ ಸಂಖ್ಯಾಶಾಸ್ತ್ರದಲ್ಲಿ ನಿಪುಣತೆ ಹೊಂದಿದ್ದಾರೆ.
ಉಚಿತ ವೇದ ಪಾಠಶಾಲೆ, ಉಚಿತ ವೇದಾಧ್ಯಯನ ನೀಡುತ್ತಿರುವ ಇವರ ಸೇವೆಯನ್ನ ಗುರುತಿಸಿ ಏಷಿಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಇವರಿಗೆ ಡಾಕ್ಟರೇಟ್ ಪದವಿ ಕೊಟ್ಟು ಗೌರವಿಸಿದೆ. ಇದಕ್ಕೆ ಕಾಶಿ ವಿಶ್ವನಾಥ ಆಚಾರ್ಯರು ಸಂತಸ ವ್ಯಕ್ತಪಡಿಸಿದ್ದಾರೆ.