ಕೆರೆ ಆಳ ಅರಿಯದೆ ನೀರಿಗಿಳಿದ ಯುವಕರು: ಪಿಯು ವಿದ್ಯಾರ್ಥಿ ಸಾವು, ಇಬ್ಬರ ರಕ್ಷಣೆ

author img

By

Published : Sep 20, 2021, 11:46 AM IST

chamarajnagar

ಚಾಮರಾಜನಗರ ತಾಲೂಕಿನ ಶಿವಗಂಗೆ ಕೆರೆಯಲ್ಲಿ ಮುಳುಗಿ ಓರ್ವ ಮೃತಪಟ್ಟಿದ್ದಾನೆ. ಇನ್ನಿಬ್ಬರು ಯುವಕರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಚಾಮರಾಜನಗರ: ಕೆರೆಯಲ್ಲಿ ಈಜಲು ಹೋದ ಮೂವರು ಪಿಯು ವಿದ್ಯಾರ್ಥಿಗಳಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಮರಾಜನಗರ ತಾಲೂಕಿನ ಶಿವಗಂಗೆ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ವಿನೋದ್ ರಾಜ್ (17) ಮೃತ ವಿದ್ಯಾರ್ಥಿ. ಕೆರೆಯಲ್ಲಿ ನೀರು ತುಂಬಿರುವುದನ್ನು ಅರಿತು ವಿನೋದ್​ನ ಸೋದರ ಮಾವ ಸೇರಿದಂತೆ ಮೂವರು ಈಜಲು ತೆರಳಿದ್ದರು. ಈ ವೇಳೆ ಕೆರೆಯ ಆಳವನ್ನು ಅರಿಯದೇ ನೀರಿನಲ್ಲಿ ಸಿಲುಕಿದ್ದಾರೆ. ಕೂಡಲೇ ಸಮಯಪ್ರಜ್ಞೆ ಮೆರೆದ ಸ್ಥಳೀಯರು ಮಹೇಶ್ ಹಾಗೂ ಮೂರ್ತಿಯನ್ನ ಎಂಬಿಬ್ಬರನ್ನು ರಕ್ಷಿಸಿದ್ದಾರೆ. ಆದರೆ ವಿನೋದ್ ರಾಜ್ ಅಷ್ಟರಲ್ಲಾಗಲೇ ಮುಳುಗಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

chamarajnagar
ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಸದ್ಯ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.