ಬೀದರ್: ಹುಣಸೇ ಮರವೊಂದರಲ್ಲಿ ನಾಲ್ಕು ಕೋತಿಗಳಿಗೆ ನೇಣು ಹಾಕಿ ವಿಕೃತಿ ಮೆರೆದಂಥ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ನೇಣು ಹಾಕಲಾಗಿದ್ದ ಕೋತಿಗಳ ಪೈಕಿ ಎರಡು ಸಾವಿಗೀಡಾಗಿದ್ದರೆ, ಇನ್ನೆರಡು ಬಚಾವಾಗಿವೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದಲ್ಲಿ ಈ ಪ್ರಕರಣ ಕಂಡು ಬಂದಿದೆ. ಇಲ್ಲಿನ ಹುಣಸೆ ಮರವೊಂದಕ್ಕೆ ಯಾರೋ ನಾಲ್ಕು ಕೋತಿಗಳಿಗೆ ನೇಣು ಹಾಕಿದ್ದರು. ಮಂಗಗಳನ್ನು ಹಿಡಿದು ಹೊಡೆದು ನೇಣು ಹಾಕಲಾಗಿದ್ದು, ಆ ಪೈಕಿ ಎರಡು ಸಾವಿಗೀಡಾಗಿದ್ದರೆ, ಇನ್ನೆರಡು ತಪ್ಪಿಸಿಕೊಂಡು ಪರಾರಿಯಾಗಿವೆ.
ಗ್ರಾಮದ ಹೊಲದಲ್ಲಿ ಮಂಗಗಳನ್ನು ಹೊಡೆದು ನೇತು ಹಾಕಿದ್ದ ಕಿಡಿಗೇಡಿಗಳ ವಿರುದ್ದ ಕಠಿಣವಾದ ಕ್ರಮಕೈಗೂಳ್ಳಬೇಕು ಎಂದು ಬೀದರ್ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಗ್ರಾಮದ ಯುವಕರು ಸಾವಿಗೀಡಾದ ಕೋತಿಗಳ ಅಂತ್ಯಸಂಸ್ಕಾರ ನೆರವೇರಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: ಯಾದಗಿರಿ: ಸಿಡಿಲು ಬಡಿದು ತಾಯಿ ಮಕ್ಕಳಿಬ್ಬರು ಸೇರಿ ನಾಲ್ವರು ಸಾವು