VIDEO - ದುಸ್ಸಾಹಸ ತೋರಿ ಮಾಂಜ್ರಾ ನದಿ ದಾಟಲು ಮುಂದಾದ ವ್ಯಕ್ತಿ ನೀರುಪಾಲು

author img

By

Published : Sep 9, 2021, 7:43 PM IST

a-man-washed-out-in-manjira-river

ಹುಚ್ಚು ಧೈರ್ಯದಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಾಂಜ್ರಾ ಸೇತುವೆ ದಾಟಲು ಯತ್ನಿಸಿದ ವ್ಯಕ್ತಿ ನೀರು ಪಾಲಾದ ಘಟನೆ ಬೀದರ್​ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಈ ಘಟನೆ ನಡೆದಿದ್ದು, ಈವರೆಗೆ ವ್ಯಕ್ತಿ ಪತ್ತೆಯಾಗಿಲ್ಲ.

ಬೀದರ್: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಾಂಜ್ರಾ ನದಿಯಲ್ಲಿ ಮೊಂಡು ಧೈರ್ಯ ತೋರಿ ಸೇತುವೆ ದಾಟಲು ಯತ್ನಿಸಿದ ವ್ಯಕ್ತಿಯೊಬ್ಬ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾನೆ.

ದುಸ್ಸಾಹಸ ತೋರಿ ಮಾಂಜ್ರಾ ನದಿ ದಾಟಲು ಮುಂದಾದ ವ್ಯಕ್ತಿ ನೀರುಪಾಲು..!

ಜಿಲ್ಲೆಯ ಭಾಲ್ಕಿ ತಾಲೂಕಿನ ಲಖನಗಾಂವ್ ಗ್ರಾಮದ ಜ್ಞಾನೇಶ್ವರ ಸ್ವರೂಪರಾವ್(50) ನೀರು ಪಾಲಾದ ವ್ಯಕ್ತಿ. ಜ್ಞಾನೇಶ್ವರ್​​ ತುಂಬಿ ಹರಿಯುತ್ತಿರುವ ಲಖನಗಾಂವ್- ಸೋನಾಳ ನಡುವಿನ ಮಾಂಜ್ರಾ ಸೇತುವೆ ದಾಟಲು ಪ್ರಯತ್ನಿಸಿದ್ದಾರೆ. ಆದ್ರೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.

ಬುಧವಾರ ಈ ಘಟನೆ ನಡೆದಿದ್ದು ಇಲ್ಲಿಯವರೆಗೆ ವ್ಯಕ್ತಿ ಪತ್ತೆಯಾಗಿಲ್ಲ. ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.