ಕಾಲೇಜಿಗೆ ರಜೆ ಎಂದು ಈಜಲು ಹೋದ್ರು: ಕೆರೆಯ ಕೆಸರಲ್ಲಿ ಸಿಲುಕಿ ವಿದ್ಯಾರ್ಥಿಗಳು ಸಾವು

author img

By

Published : Sep 18, 2022, 8:38 PM IST

ಕೆರೆ ಕೆಸರಲ್ಲಿ ಸಿಲುಕಿ ಯುವಕರು ಸಾವು

ಈಜಲು ತೆರಳಿದ್ದ ಇಬ್ಬರು ಯುವಕರು ಕೆರೆ ಕೆಸರಲ್ಲಿ ಸಿಲುಕಿ ಸಾವು. ಮೃತರಿಬ್ಬರು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ವಿಜಯನಗರ: ಈಜಾಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಕೆರೆ ಕೆಸರಲ್ಲಿ ಸಿಲುಕಿ ಯುವಕರು ಸಾವು: ಗ್ರಾಮದ ಅಮರ್ (19), ಚಂದ್ರು (20) ಮೃತ ಯುವಕರು. ಹರಪನಹಳ್ಳಿಯ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಅಮರ್ ಪ್ರಥಮ ಪಿಯುಸಿ ಮತ್ತು ಚಂದ್ರು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ಕೆರೆಗೆ ಈಜಲು ಹೋಗಿದ್ದರು. ಕೆರೆಯಲ್ಲಿ ಕೆಸರು ಇದ್ದ ಹಿನ್ನೆಲೆ ಕೆಸರಿನಲ್ಲಿ ಕಾಲು ಸಿಕ್ಕಿಹಾಕಿಕೊಂಡು ಇಬ್ಬರು ಸಾವನ್ನಪಿದ್ದಾರೆ.

ಮುಳುಗು ತಜ್ಞರು ಕೆರೆಯಲ್ಲಿ ಶೋಧ ಕಾರ್ಯ ನಡೆ ಇಬ್ಬರ ಮೃತದೇಹ ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶಿವಕುಮಾರ ಬಿರಾದಾರ್, ಪಿಎಸ್ಐ ಗುರುರಾಜ್ ಭೇಟಿ ನೀಡಿದರು. ಹಲುವಾಗಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ ದುರಂತ: ಪ್ರತ್ಯೇಕ ಘಟನೆಯಲ್ಲಿ 7 ಜನರ ಸಾವು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.