ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ

author img

By

Published : Jun 10, 2019, 11:18 PM IST

ಹಸಿರು ಸೇನೆಯ ನೂರಾರು ಕಾರ್ಯಕರ್ತರು ಹಾಗೂ ರಾಜ್ಯ ರೈತ ಸಂಘದ ವತಿಯಿಂದ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

ಬಳ್ಳಾರಿ: ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಕಾರ್ಯಕರ್ತರು ಜಿಲ್ಲೆಯ ಹೊಸಪೇಟೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ಪ್ರತಿಭಟನೆ

ನೂರಾರು ರೈತರು ಬೆಳಿಗ್ಗೆ 8ರಿಂದ ಪ್ರತಿಭಟನಾ ಸ್ಥಳಕ್ಕೆ ಬಂದು ಶಾಮಿಯಾನ ಹಾಕಿ ಸಿದ್ಧತೆ ನಡೆಸಿದರು. ನಂತರ ಉಪಾಹಾರವನ್ನು ರಸ್ತೆಯ ಮಧ್ಯದಲ್ಲೇ ತಯಾರಿಸಿಕೊಂಡರು. ಬಳಿಕ, ನೂರಾರು ರೈತರು ಬೈಕ್‍ಗಳನ್ನು ರಸ್ತೆಗೆ ಅಡ್ಡಗಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಕಾರ್ತಿಕ ಮಾತನಾಡಿ, ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನ ಬರೆದಂತೆ. ಸರ್ಕಾರಗಳು ರೈತರಿಗೆ ಅನಕೂಲ ಮಾಡಿಕೊಡುತ್ತಿಲ್ಲ. ಬದಲಿಗೆ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ವಾಹನ ಸವಾರರ ಪರದಾಟ:

ರಾಷ್ಟ್ರೀಯ ಹೆದ್ದಾರಿ ತಡೆಯೊಡ್ಡಿದ್ದರಿಂದ ಕೆಲಕಾಲ ವಾಹನ ಸವಾರರು ಪರದಾಡಬೇಕಾಯಿತು. ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಮಂಗಳೂರು, ಬಾಗಲಕೋಟೆ, ವಿಜಯಪುರ, ಪುಣೆ, ಮುಂಬೈನತ್ತ ಪ್ರಯಾಣ ಬೆಳೆಸುವ ವಾಹನಗಳು ಅತೀವ ತೊಂದರೆ ಅನುಭವಿಸಬೇಕಾಯಿತು.

ಎಸ್ಪಿ ಭೇಟಿ:

ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ಬಿ.ನಿಂಬರಗಿ ಭೇಟಿ ನೀಡಿದರು.‌ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ನಿಮ್ಮೆಲ್ಲಾ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಹೀಗಾಗಿ, ಪ್ರತಿಭಟನೆಯನ್ನು ಕೈಬಿಡುವಂತೆ ಎಸ್ಪಿ ಮನವಿ ಮಾಡಿದರು.‌ ಎಸ್ಪಿಯವರ ಮನವಿ ಮೇರೆಗೆ ರೈತರ ಸಂಘದ ಮುಖಂಡರು ಪ್ರತಿ‌ಭಟನೆ ಕೈಬಿಟ್ಟರು.

Intro:ಭೂಸ್ವಾಧೀನ ಕಾಯಿದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ಬಳ್ಳಾರಿ: ಭೂಸ್ವಾದೀನ ಕಾಯಿದೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಕಾರ್ಯಕರ್ತರು ಜಿಲ್ಲೆಯ ಹೊಸಪೇಟೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನೂರಾರು ರೈತರು ಬೆಳಿಗ್ಗೆ 8 ರಿಂದ ಪ್ರತಿಭಟನಾ ಸ್ಥಳಕ್ಕೆ ಬಂದು ಶಾಮಿಯಾನ ಹಾಕಿ ಸಿದ್ಧತೆ ನಡೆಸಿದರು. ನಂತರ ಉಪಾಹಾರ ಸೇವೆಗಾಗಿ ರಸ್ತೆಯ ಮಧ್ಯೆದಲ್ಲೇ ಅಡುಗೆ ತಯಾರಿಸಿಕೊಂಡರು. ಬಳಿಕ, ನೂರಾರು ರೈತರು ಬೈಕ್‍ಗಳನ್ನು ರಸ್ತೆಗೆ ಅಡ್ಡಗಟ್ಟಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ದಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಕಾರ್ತಿಕ ಅವರು ಮಾತನಾಡಿ, ಭೂಸ್ವಾದೀನ ಕಾಯಿದೆ ತಿದ್ದುಪಡಿ ರೈತರಿಗೆ
ಮರಣ ಶಾಸನ ಬರೆದಂತೆ. ಸರ್ಕಾರಗಳು ರೈತರಿಗೆ ಅನಕೂಲ ಮಾಡಿಕೊಡುತ್ತಿಲ್ಲ. ಬದಲಿಗೆ ಸಂಕಷ್ಟಕ್ಕೆ ಸಿಲುಕಿಸುತ್ತಿವೆ ಸರ್ಕಾರ ಭೂಸ್ವಾದೀನ ಪ್ರಕ್ರಿಯೆಯನ್ನು ಬಿಡಬೇಕು. ಇಲ್ಲವಾದ್ರೇ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯನ್ನು ಲೈನಿಂಗ್ ಹೆಸರಲ್ಲಿ ನವೀಕರಣಗೊಳಿಸಲಾಗುತ್ತಿದೆ. ಅದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಅಲ್ಲದೇ, ಆಂಧ್ರಪ್ರದೇಶಕ್ಕೆ ಅನುಕೂಲ ವಾಗಲೆಂದು ಕಾಲುವೆಯನ್ನು ಅಗಲೀಕರಣ ಮಾಡಲಾಗುತ್ತದೆ ಎಂದು ಆರೋಪಿಸಿದರು.
ವಾಹನ ಸವಾರರ ಪರದಾಟ: ರಾಷ್ಟ್ರೀಯ ಹೆದ್ದಾರಿ ತಡೆಯೊಡ್ಡಿದ್ದರಿಂದ ಕೆಲಕಾಲ ವಾಹನ ಸವಾರರು ಪರದಾಡಬೇಕಾಯಿತು. ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಮಂಗಳೂರು, ಬಾಗಲಕೋಟೆ, ವಿಜಯಪುರ, ಪುಣೆ, ಮುಂಬೈನತ್ತ ಪ್ರಯಾಣ ಬೆಳೆಸುವ ವಾಹನಗಳು ಅತೀವ ತೊಂದರೆ ಅನುಭವಿಸ ಬೇಕಾಯಿತು. ಅಂದಾಜು 2 ಕಿಲೋ ಮೀಟರ್ ವರೆಗೆ ವಾಹನಗಳು ರಸ್ತೆ ಎರಡು ಕಡೆ ಸಾಲುಗಟ್ಟಿ ನಿಂತಿದ್ದು ಕಂಡುಬಂತು. ಹೊಸಪೇಟೆ ವಾಹನಗಳು ಇಲ್ಲದಿದ್ದರಿಂದ ಪಾಲಕರು ಮಕ್ಕಳನ್ನು ಪಾದಯಾತ್ರೆ ಮೂಲಕ ಕರೆ ತಂದರು. ಖಾಸಗಿ ಮತ್ತು ಸರ್ಕಾರಿ ಬಸ್‍ಗಳ ಸಂಚಾರ ಸೇರಿದಂತೆ ಇತರೆ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು.‌ ವಾಹನ ಸವಾರರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು. ಶಾಲಾ ವಾಹನಗಳಿಗೆ ಹಾಗೂ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ರೈತರು ಅನುವು ಮಾಡಿಕೊಟ್ಟರು.
Body:ಎಸ್ಪಿ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ಬಿ.ನಿಂಬರಗಿ ಅವರು‌ ಭೇಟಿ ನೀಡಿದ್ದರು.‌ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ನಿಮ್ಮೆಲ್ಲಾ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಹೀಗಾಗಿ, ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಡುವಂತೆ ಎಸ್ಪಿಯವರು ಮನವಿ ಮಾಡಿದರು.‌ ಎಸ್ಪಿಯವರ ಮನವಿ ಮೇರೆಗೆ ರೈತರ ಸಂಘದ ಮುಖಂಡರು ಪ್ರತಿ‌ಭಟನೆಯನ್ನು‌ ಕೈಬಿಟ್ಟರು.
ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಪಿ.ನಾರಾಯಣರೆಡ್ಡಿ, ತಾಲೂಕು ಘಟಕದ ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಮುಖಂಡರಾದ ಚಿನ್ನದೊರೆ, ಎಸ್.ಎಲ್.ರುದ್ರಪ್ಪ, ಅಯ್ಯಣ್ಣ, ರೇವಣಸಿದ್ದಪ್ಪ, ನಾಗೇಶ, ಬಿ.ಜಾಕೀರ ಹುಸೇನ್, ಮಲ್ಲಿಕಾರ್ಜುನ, ಕಂಬದ ಸುರೇಶ, ಉದ್ದಾನಸ್ವಾಮಿ, ಮಲ್ಲಿಕಾರ್ಜುನ, ಜೀರಸಂಗಪ್ಪ, ಶ್ರೀನಿವಾಸ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_04_10_FARMERS_SANGHA_NATIONAL_HIVEY_BLOCKED_NEWS_7203310

KN_BLY_04l_10_FARMERS_SANGHA_NATIONAL_HIVEY_BLOCKED_NEWS_7203310

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.