ಭಾರತ ದಕ್ಷಿಣ ಆಫ್ರಿಕಾ ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿಯ ಅವಿನಾಶ ಪೋತದಾರ ನೇಮಕ

author img

By

Published : Sep 27, 2022, 3:44 PM IST

ಅವಿನಾಶ ಪೋತದಾರ

ಬೆಳಗಾವಿಯ ಅವಿನಾಶ ಪೋತದಾರಗೆ ಬಿಸಿಸಿಐ ಮಹತ್ವದ ಜವಾಬ್ದಾರಿ ನೀಡಿದೆ.

ಬೆಳಗಾವಿ: ಬೆಳಗಾವಿಯ ನಿವಾಸಿ ಅವಿನಾಶ ಪೋತದಾರಗೆ ಬಿಸಿಸಿಐ ಮಹತ್ವದ ಜವಾಬ್ದಾರಿ ನೀಡಿದೆ. ನಾಳೆ ನಡೆಯುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ಮಧ್ಯೆ ನಡೆಯುವ ಟಿ-20ಪಂದ್ಯಕ್ಕೆ ಪರೀವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಇಲ್ಲಿನ ಜಾಧವ್ ನಗರದ ನಿವಾಸಿ ಆಗಿರುವ ಅವಿನಾಶ್ ‌ಪೋತದಾರ್ ಕಳೆದ ಎರಡು ದಶಕಗಳಿಂದ ಸತತವಾಗಿ ಕೆಎಸ್‌ಸಿಎ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಎಸ್‌ಸಿಎ ಧಾರವಾಡ ವಲಯದ ಕನ್ವೀನರ್ ಆಗಿರುವ ಅವಿನಾಶ್ ಪೋತದಾರ್ ಉದ್ಯಮಿಯೂ ಆಗಿದ್ದಾರೆ. ಸಕ್ಕರೆ ಕಾರ್ಖಾನೆ, ಸಿನೆಮಾ ಟಾಕೀಸ್ ಸೇರಿದಂತೆ ಹಲವು ಉದ್ಯಮಗಳು ಅವಿನಾಶ್ ಪೋತೆದಾರ್ ನಡೆಸುತ್ತಿದ್ದಾರೆ.

ಇದೀಗ ನಾಳೆಯಿಂದ ನಡೆಯುವ ಭಾರತ ದಕ್ಷಿಣ ಆಫ್ರಿಕಾ ಟಿ 20 ಸರಣಿಗೆ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಾಳೆ ತಿರುವನಂತಪುರಂನಲ್ಲಿ ಚೊಚ್ಚಲ ಟಿ-20 ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ.

(ಓದಿ: India and South Africa T20 Match: ತಿರುವನಂತಪುರಂಗೆ ಬಂದಿಳಿದ ಉಭಯ ತಂಡಗಳ ಆಟಗಾರರು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.