ಬೆಂಗಳೂರು: ಯುವಕರಿಬ್ಬರು ನಾಯಿಯನ್ನ ಹಗ್ಗದದಿಂದ ಕಟ್ಟಿ ಮನಸ್ಸೊ ಇಚ್ಚೆ ಥಳಿಸಿ, ವಿಕೃತಿ ಮೆರೆದಿರುವ ಘಟನೆ ಕೆ.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿದ್ದ ತಮ್ಮ ನಾಯಿ ಪಕ್ಕದ ಮನೆಯ ನಾಯಿ ಕಚ್ಚಿದೆ ಎಂದು ಕನಿಕರವಿಲ್ಲದೇ ಥಳಿಸಿರುವ ದುರುಳರ ವಿರುದ್ಧ ಶ್ವಾನ ಪ್ರಿಯರು ಹಿಡಿಶಾಪ ಹಾಕಿದ್ದಾರೆ.
ನಾಯಿಯನ್ನ ಕಟ್ಟಿಹಾಕಿ ದೊಣ್ಣೆಗಳಿಂದ ಹಲ್ಲೆ ಮಾಡಿದ ಸಹೋದರರು ಇದನ್ನ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಕೆ.ಆರ್ಪುರಂ ನ ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಗದ್ದುಗೆಪ್ಪ ಎಂಬುವರು ಸಾಕಿಕೊಂಡಿದ್ದ ನಾಯಿ ಮೇಲೆ ಹಲ್ಲೆ ಮಾಡಿ ಸಹೋದರರು ವಿಕೃತಿ ಮೆರೆದಿದ್ದಾರೆ. ಲೋಹಿತ್ ಕುಮಾರ್ ಹಾಗೂ ಅವನ ಸಹೋದರಿಂದ ನಾಯಿ ಹಲ್ಲೆ ನಡೆದಿದ್ದು, ಗದ್ದಿಗೆಪ್ಪ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ನಾಯಿ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದ ವಿಡಿಯೋ ವೈರಲ್: ಪ್ರಾಣಿಪ್ರಿಯರ ಆಕ್ರೋಶ