ನಬಾರ್ಡ್ ವತಿಯಿಂದ ರಾಜ್ಯಪಟ್ಟದ ಸಾಲಗೋಷ್ಠಿ ಸಮಾವೇಶ

author img

By

Published : Feb 24, 2021, 3:51 PM IST

Nationwide conference to give loan from NABARAD

ಕೃಷಿ ಸಾಲಕ್ಕೆ ₹ 1,16,346 ಕೋಟಿ, ಕೃಷಿ ಮೂಲಭೂತ ಸೌಕರ್ಯಕ್ಕೆ ₹ 6,734 ಕೋಟಿ, ಕೃಷಿ ಪೂರಕ ಚಟುವಟಿಕೆಗಳಿಗೆ ₹22,133 ಕೋಟಿ ಸೇರಿ ಒಟ್ಟು ಕೃಷಿ ಸಾಲ ₹1,45,213 ಬ್ಯಾಂಕ್ ನೀಡಬೇಕಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ₹ 1,08,509 ಕೋಟಿ ಸಾಲ ಸೇರಿದಂತೆ ಗೃಹ ಹಾಗೂ ಇತರೆ ಆದ್ಯತೆ ವಲಯಕ್ಕೆ ₹2,96,051 ಸಾಲ ನೀಡಬೇಕು ಎಂದು ನಬಾರ್ಡ್ ಬ್ಯಾಂಕ್​​ಗಳಿಗೆ ಸಲಹೆ ನೀಡಿದೆ..

ಬೆಂಗಳೂರು : ನಬಾರ್ಡ್ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ಸಾಲಗೋಷ್ಠಿಯಲ್ಲಿ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಕೃಷಿ ಕ್ಷೇತ್ರ ಈಗ ಉತ್ಪಾದನೆಯಿಂದ ಆದಾಯ ತರುವ ಹಾದಿಗೆ ಬೆಳೆಯಬೇಕಿದೆ ಎಂದರು. ಕೇವಲ 18.21% ಬಂಡವಾಳ ಕೃಷಿ ಕ್ಷೇತ್ರಕ್ಕೆ ಹೂಡಿಕೆ ಆಗುತ್ತಿದೆ, ಇದು ಹೆಚ್ಚಾಗಬೇಕಿದೆ. ಮೀನುಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಬಂಡವಾಳ ಹರಿದು ಬರಬೇಕು. ಜೊತೆಗೆ ರಾಜ್ಯ ಸರ್ಕಾರ ಕೇಂದ್ರದ ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಉತ್ತೇಜನೆ ನೀಡುತ್ತಿದೆ ಎಂದರು.

ರಾಜ್ಯ 10 ವರ್ಷದಲ್ಲಿ ಸಾಕಷ್ಟು ಅತಿವೃಷ್ಟಿ-ಅನಾವೃಷ್ಟಿ ಅನುಭವಿಸಿದೆ. ಜೊತೆಗೆ ಕಳೆದ ವರ್ಷ ಕೋವಿಡ್ ಮಹಾಮಾರಿಯಿಂದ ಲಾಕ್​​ಡೌನ್ ಸಂದರ್ಭದಲ್ಲೂ ಉತ್ಪಾದನೆ ಹೆಚ್ಚಾದರೂ, ರೈತರು ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ, ಸಾಲದ ವಿಷಯದಲ್ಲಿ ರೈತರ ಮೇಲೆ ಮೃದು ಧೋರಣೆ ಅನುಸರಿಸಿ ಎಂದು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ವಿವಿಧ ಬ್ಯಾಂಕ್​​​ಗಳ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮೀನುಗಾರಿಕೆ ಕುರಿತ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಇವೆ. ಇದಕ್ಕೆ ರೈತರು ಬ್ಯಾಂಕ್​​ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಸಾಲದ ಮಂಜೂರು ಆಗಿರುವ ಸಂಖ್ಯೆ ಕಡಿಮೆ ಇದೆ. ಆತ್ಮನಿರ್ಭರ ಭಾರತದ ಯೋಜನೆಯತ್ತ ಬ್ಯಾಂಕ್ ಗಮನ ಹರಿಸಬೇಕು ಎಂದು ವಂದಿತಾ ಶರ್ಮಾ ಬ್ಯಾಂಕ್​ಗಳ ಕುರಿತು ಹೇಳಿದರು.

ನಂತರ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್, ರಾಜ್ಯದಲ್ಲಿ ಶೇ.55ಕ್ಕಿಂತ ಹೆಚ್ಚು ಭೂ ಹಿಡುವಳಿ 1 ಹೆಕ್ಟರ್​ಗಿಂತ ಕಡಿಮೆ ಇದೆ. ಇದರಲ್ಲೂ ರಾಜ್ಯದಲ್ಲಿ ಗುತ್ತಿಗೆ ರೂಪದಲ್ಲಿ ಕೃಷಿ ನಡೆಯುತ್ತಿದೆ, ಈ ಕಾರಣದಿಂದ ಹೆಚ್ಚಿನ ಯೋಜನೆಗಳು ಇವರಿಗೆ ದೊರಕುವುದಿಲ್ಲ ಎಂದರು.

ಇದೇ ವೇಳೆ ಸ್ಟೇಟ್ ಫೋಕಸ್ ಪೇಪರ್ 2021-22 ಪುಸ್ತಕವನ್ನು ಬಿಡುಗಡೆ ಮಾಡಲಾಯಿತು, ಕಾರ್ಯಕಾರಿ ಸಾರಾಂಶ ಹೊತ್ತ ಇದರಲ್ಲಿ 2021-22ರ ಕೃಷಿ ವಲಯದಲ್ಲಿ ₹1,45,213 ಕೋಟಿ ಆದ್ಯತೆ ವಲಯದಲ್ಲಿ ವೆಚ್ಚ ಮಾಡಲು ಸರ್ಕಾರಕ್ಕೆ ಹಾಗೂ ಬ್ಯಾಂಕ್​​​ಗಳಿಗೆ ಸಲಹೆ ನೀಡಲಾಗಿದೆ.

ಕೃಷಿ ಸಾಲಕ್ಕೆ ₹1,16,346 ಕೋಟಿ, ಕೃಷಿ ಮೂಲಸೌಕರ್ಯಕ್ಕೆ ₹ 6,734 ಕೋಟಿ, ಕೃಷಿ ಪೂರಕ ಚಟುವಟಿಕೆಗಳಿಗೆ ₹22,133 ಕೋಟಿ ಸೇರಿ ಒಟ್ಟು ಕೃಷಿ ಸಾಲ ₹1,45,213 ಬ್ಯಾಂಕ್ ನೀಡಬೇಕಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ₹1,08,509 ಕೋಟಿ ಸಾಲ ಸೇರಿದಂತೆ ಗೃಹ ಹಾಗೂ ಇತರೆ ಆದ್ಯತೆ ವಲಯಕ್ಕೆ ₹2,96,051 ಸಾಲ ಮುಂದಿನ ಆರ್ಥಿಕ ವರ್ಷದಲ್ಲಿ ನೀಡಬೇಕು ಎಂದು ನಬಾರ್ಡ್ ಬ್ಯಾಂಕ್​​ಗಳಿಗೆ ಸಲಹೆ ನೀಡಿದೆ.

ಈ ವೇಳೆ ಜಿಕೆವಿಕೆ ಉಪಕುಲಪತಿ ರಾಜೇಂದ್ರ ಪ್ರಸಾದ್, ನಬಾರ್ಡ್ ಮುಖ್ಯ ವ್ಯವಸ್ಥಾಪಕ ನೀರಜ್ ಕುಮಾರ್ ವರ್ಮಾ, ಗ್ರಾಮೀಣ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಮುಖ್ಯಸ್ಥರು ಪಾಲ್ಗೊಂಡಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಕುರಿತ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.

ಇದನ್ನೂ ಓದಿ: ಮೈಸೂರು ಮಹಾನಗರ ಪಾಲಿಕೆ ಜೆಡಿಎಸ್​-ಕಾಂಗ್ರೆಸ್ ಪಾಲು:ಮೇಯರ್​ ಆಗಿ ರುಕ್ಮಿಣಿ ಮಾದೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.