ರಾಜ್ಯಾದ್ಯಂತ ಅಕ್ಟೋಬರ್ 21ರಿಂದ ಮಧ್ಯಾಹ್ನ ಬಿಸಿಯೂಟ ಆರಂಭ: ಸಚಿವ ಬಿ.ಸಿ.ನಾಗೇಶ್

author img

By

Published : Oct 11, 2021, 2:25 PM IST

Midday Meals Start Again From October 21

ಕೋವಿಡ್‌-19 ಹಾಗೂ ದಸರೆಯ ರಜೆ ಇದ್ದುದರಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ತಾಂತ್ರಿಕ ಸಮಿತಿ ಒಪ್ಪಿದರೆ 1ರಿಂದ 5ನೇ ತರಗತಿಯ ಆರಂಭಕ್ಕೆ ಸಿದ್ಧ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌-19 ಕಾರಣದಿಂದ ಶಾಲಾ ಬಾಗಿಲು ಮುಚ್ಚಿದ್ದರಿಂದ ಮಕ್ಕಳಿಗಾಗಿ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟಕ್ಕೆ ಕೊಕ್​ ನೀಡಲಾಗಿತ್ತು. ಇದೀಗ ಕೋವಿಡ್‌ ಇಳಿಕೆಯಾಗುತ್ತಿದ್ದು ಶಾಲೆಗಳು ಮತ್ತೆ ಎಂದಿನಂತೆ ಆರಂಭಗೊಂಡಿವೆ. ಹಾಗಾಗಿ, ಇದೇ ಅಕ್ಟೋಬರ್ 21 ರಂದು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮತ್ತೆ ಪ್ರಾರಂಭ ಮಾಡಲಾಗುವುದು ಅಂತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.‌

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಬಳಿಕ ಮಾತನಾಡಿದ ಸಚಿವರು, ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚು. ಸದ್ಯ ಅಕ್ಟೋಬರ್‌ 20 ತನಕ ರಜೆ ಘೋಷಿಸಲಾಗಿದೆ.‌ ಹೀಗಾಗಿ, ರಜೆ ಮುಗಿದ ಬಳಿಕವೇ ಮಧ್ಯಾಹ್ನದ ಬಿಸಿಯೂಟ ಶುರುವಾಗಲಿದೆ ಎಂದರು.

ಶಾಲಾ-ಕಾಲೇಜು ಹಾಜರಾತಿ ಉತ್ತಮ:

ರಾಜ್ಯಾದ್ಯಂತ ಶಾಲಾ-ಕಾಲೇಜು ಹಾಜರಾತಿ ಉತ್ತಮವಾಗಿದೆ. ಹಲವು ಶಾಲಾ-ಕಾಲೇಜುಗಳು ಸ್ಯಾಟ್ಸ್​ನಲ್ಲಿ ಹಾಜರಾತಿ ಅಂಕಿ-ಅಂಶವನ್ನು ಅಪ್​ಲೋಡ್ ಮಾಡದ ಕಾರಣದಿಂದಾಗಿ ಕಡಿಮೆ ಹಾಜರಾತಿಯೆಂದು ತೋರಿಸುತ್ತಿದೆ. ಈ ಸಂಬಂಧ ಆ ಶಾಲೆಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು. ರಾಜ್ಯಾದ್ಯಂತ ಹಲವು ಜಿಲ್ಲೆಗಳು ಶೇ. 90 ರಷ್ಟು ಹಾಜರಾತಿಯನ್ನು ಹೊಂದಿವೆ ಎಂದು ಹೇಳಿದರು.

ದಸರಾ ರಜೆ ಬಳಿಕ 1-5 ನೇ ತರಗತಿ ಆರಂಭ:

ಇನ್ನು ಕೊರೊನಾ ಹಿನ್ನೆಲೆಯಲ್ಲಿ ಪ್ರಾಥಮಿಕ ತರಗತಿ ಆರಂಭವಾಗಿಲ್ಲ‌. ಹೀಗಾಗಿ, ದಸರಾ ರಜೆ ಮುಗಿದ ಬಳಿಕ ಸಿಎಂ ಬಸವರಾಜ ಬೊಮ್ಮಯಿ ಅವರೊಂದಿಗೆ ಸಭೆ ನಡೆಸಿ ಶಾಲಾರಂಭದ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಸೂಚಿಸಿದರೆ 1-5 ನೇ ತರಗತಿ ಆರಂಭಿಸಲು ತಯಾರಿ ಸಹ ಮಾಡಿಕೊಂಡಿರುವುದಾಗಿ ಶಿಕ್ಷಣ ಸಚಿವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.