ಅಕಾಲಿಕ ಮಳೆಯ ಬರೆ: ತುರ್ತು, ಮನೆ ಹಾನಿ ಪರಿಹಾರಾರ್ಥವಾಗಿ 418.72 ಕೋಟಿ ಅನುದಾನ ಬಿಡುಗಡೆ

author img

By

Published : Nov 23, 2021, 9:15 PM IST

ರಾಜ್ಯ ಸರ್ಕಾರ

ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 164.85 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ ವಿಪತ್ತು ಪರಿಹಾರ ನಿಧಿಯಡಿ ಹೆಚ್ಚುವರಿ ಮೊತ್ತದಿಂದ ರೂ.253.87 ಕೋಟಿ ಸೇರಿ ಒಟ್ಟು 418.72 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು: ಪ್ರವಾಹದಿಂದ ನಲುಗಿ ಹೋಗಿರುವ ಸಂತ್ರಸ್ತರಿಗೆ ಪರಿಹಾರಾರ್ಥವಾಗಿ ರಾಜ್ಯ ಸರ್ಕಾರ ನಡಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಅಕಾಲಿಕ‌ ಮಳೆಯಿಂದ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿ ಹೋಗಿದೆ. ಆಗಸ್ಟ್ ನವೆಂಬರ್ ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಇದೀಗ ರಾಜ್ಯ ಸರ್ಕಾರ ತುರ್ತು ಪರಿಹಾರ ಹಾಗೂ ಮನೆ ಹಾನಿ ಪರಿಹಾರಕ್ಕಾಗಿ SDRFನಡಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಒಟ್ಟು 418.72 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 164.85 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ ವಿಪತ್ತು ಪರಿಹಾರ ನಿಧಿಯಡಿ (SDRF) ಹೆಚ್ಚುವರಿ ಮೊತ್ತದಿಂದ ರೂ.253.87 ಕೋಟಿ ಸೇರಿ ಒಟ್ಟು 418.72 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ನೆರೆಗೆ ಗೃಹೋಪಯೋಗಿ ವಸ್ತುಗಳ ಹಾನಿಗೊಳಗಾದ 85,862 ಸಂತ್ರಸ್ತರನ್ನು ಗುರುತಿಸಲಾಗಿದೆ. ಪೂರ್ಣ ಹಾಗೂ ತೀವ್ರ ಹಾನಿಗೊಳಗಾದ 11,455 ಸಂತ್ರಸ್ತರು, ಭಾಗಶಃ ಹಾನಿಗೊಳಗಾದ 44,786 ಸಂತ್ರಸರಿಗೆ ಪರಿಹಾರ ಮೊತ್ತ ನೀಡಲಾಗುವುದು.

ಜಿಲ್ಲಾವಾರು ಪರಿಹಾರ ಮೊತ್ತ ಬಿಡುಗಡೆ:

ಬಾಗಲಕೋಟೆ 7.84 ಕೋಟಿ ರೂ., ಬಳ್ಳಾರಿ 2.40 ಕೋಟಿ, ಬೆಳಗಾವಿ 221.93 ಕೋಟಿ, ಬೆಂ.ಗ್ರಾಮಾಂತರ 4.30 ಕೋಟಿ, ಬೆಂಗಳೂರು ನಗರ 3.09 ಕೋಟಿ, ಬೀದರ್ 2.02 ಕೋಟಿ, ಚಾಮರಾಜನಗರ 2.13 ಕೋಟಿ, ಚಿಕ್ಕಬಳ್ಳಾಪುರ 8.05 ಕೋಟಿ, ಚಿಕ್ಕಮಗಳೂರು 3.31 ಕೋಟಿ, ಚಿತ್ರದುರ್ಗ 8.44 ಕೋಟಿ, ದ.ಕನ್ನಡ 2.28 ಕೋಟಿ, ದಾವಣಗೆರೆ 15.19 ಕೋಟಿ, ಧಾರವಾಡ 14.74 ಕೋಟಿ, ಗದಗ 4.54 ಕೋಟಿ ರೂ. ಪರಿಹಾರ ಮೊತ್ತ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.

ಹಾಸನ 4.53 ಕೋಟಿ, ಹಾವೇರಿ 37.84 ಕೋಟಿ, ಕಲಬುರ್ಗಿ 9.40 ಕೋಟಿ, ಕೊಡಗು 80 ಲಕ್ಷ, ಕೋಲಾರ 4.05 ಕೋಟಿ, ಕೊಪ್ಪಳ 1.05 ಕೋಟಿ, ಮಂಡ್ಯ 2.88 ಕೋಟಿ, ಮೈಸೂರು 12.43 ಕೋಟಿ, ರಾಯಚೂರು 73 ಲಕ್ಷ, ರಾಮನಗರ 1.66 ಕೋಟಿ, ಶಿವಮೊಗ್ಗ 6.33 ಕೋಟಿ, ತುಮಕೂರು 2.85 ಕೋಟಿ, ಉಡುಪಿ 1.95 ಕೋಟಿ, ಉ.ಕನ್ನಡ 23.50 ಕೋಟಿ, ವಿಜಯಪುರ 2.45 ಕೋಟಿ, ಯಾದಗಿರಿ 3.86 ಕೋಟಿ ಮತ್ತು ವಿಜಯನಗರಕ್ಕೆ 1.98 ಕೋಟಿ ರೂ. ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.