ಸಿದ್ದರಾಮಯ್ಯರೇ ದೇಶದ್ರೋಹಿಗಳನ್ನು ಬೆಂಬಲಿಸಬೇಡಿ, ದೇಶ ಭಕ್ತರಿಗೆ ಬೆಂಬಲ ಕೊಡಿ : ಕೆ.ಎಸ್. ಈಶ್ವರಪ್ಪ

author img

By

Published : Aug 6, 2022, 3:54 PM IST

KN_SMG_01_KSE_BYTE_KA10011

ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟುಬಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಕುರಿತು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗ: ಸಿದ್ದರಾಮೋತ್ಸವದಂತಹ ನೂರು ಕಾರ್ಯಕ್ರಮಗಳನ್ನು ನಾವು ಮಾಡಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಕಾರ್ಯಕ್ರಮ ಆದ ಮೇಲೆ ಅದರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ, ಆವಾಗಲೂ ಹೇಳಿದ್ದೇ ಈವಾಗಲೂ ಹೇಳುತ್ತೇನೆ ಎಂದರು.

ಸಿದ್ದರಾಮಯ್ಯ ನೂರು ವರ್ಷ ಬದುಕಲಿ ಅಂತ ಶುಭ ಕೋರುತ್ತೇನೆ ಹಾಗೂ ದೇಶದ್ರೋಹಿಗಳಿಗೆ ಬೆಂಬಲ ಕೊಡಬೇಡಿ, ದೇಶ ಭಕ್ತರಿಗೆ ಬೆಂಬಲ ಕೊಡಿ ಅಂತ ಸಹ ಹೇಳುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಅಮೃತಮಹೋತ್ಸವ ಮಾಡಿರೋದೇ ದೊಡ್ಡದು ಅಂತ ಅಂದುಕೊಂಡಿದ್ದಾರೆ‌. ಅವರ ಜೀವನದಲ್ಲಿ ಒಟ್ಟಾಗಿ ಕಾರ್ಯಕ್ರಮ ಮಾಡಿರೋದೇ ಅವರಿಗೆ ಗೊತ್ತಿಲ್ಲ ಎಂದು ಟೀಕಿಸಿದರು. ಸಿದ್ದರಾಮೋತ್ಸವದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಗೊಂದಲಗಳು ಜಾಸ್ತಿ ಆಗಿವೆ. ರಾಹುಲ್ ಗಾಂಧಿ ಸನ್ನೆ ಮಾಡುವ ಮೂಲಕ ತಬ್ಬಿಕೊಳ್ಳಿ ಎಂದು ಹೇಳುತ್ತಾರೆ ಇದು ಅವರ ಪರಿಸ್ಥಿತಿ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಈ ಜನ್ಮದಲ್ಲಿ ಒಂದಾಗಲ್ಲಾ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಹ ಆಗಲ್ಲ ಎಂದು ಈಶ್ವರಪ್ಪ ಭವಿಷ್ಯ ನುಡಿದರು.

ಸಿದ್ದರಾಮೋತ್ಸವ ಕುರಿತು ಈಶ್ವರಪ್ಪ ಹೇಳಿಕೆ

ಅವರು ಬಡವರ ಪರ, ರಾಷ್ಟ್ರಭಕ್ತರ ಪರ ಇದ್ದಿದ್ದರೆ ದೇಶದಲ್ಲಿ ಕಾಂಗ್ರೆಸ್​ ನಿರ್ನಾಮ ಆಗುತ್ತಿರಲಿಲ್ಲಾ. ಜನರ ಪರ ಇಲ್ಲಾ. ಹಾಗಾಗಿ ಎಲ್ಲಾ ಚುನಾವಣೆಗಳಲ್ಲಿ ಸೋತು ನಿರ್ನಾಮ ಆಗಿದ್ದಾರೆ. ಪ್ರತಿಸಲ ಚುನಾವಣೆ ಬಂದಾಗ ತಾವೇ ಗೆಲ್ಲುತ್ತೇವೆ ಅನ್ನುತ್ತಾರೆ. ನಾನು ಸೆಡ್ಡು ಹೊಡೆದು ಹೇಳುತ್ತೇನೆ.. ಬರೋ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ಮೂಲಕ ನಮ್ಮವರೇ ಮುಖ್ಯಮಂತ್ರಿ ಆಗ್ತಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಪ್ರವೀಣ್ ಹತ್ಯೆ ಪ್ರಕರಣದ ರಾಷ್ಟ್ರ ದ್ರೋಹಿಗಳಿಗೆ ಯಾವುದೇ ಕಾರಣಕ್ಕೂ ಸುಮ್ಮನೇ ಬಿಡೊದಿಲ್ಲಾ ಎಂದು ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ: ಎಸಿಬಿ ವಿಚಾರಣೆಗೆ ಹಾಜರಾದ ಶಾಸಕ ಜಮೀರ್ ಅಹಮದ್ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.