ಬೆಂಗಳೂರಲ್ಲಿ ಹಾಡಹಗಲೇ ಝಳಪಿಸಿದ ಮಾರಕಾಸ್ತ್ರ.. ವ್ಯಕ್ತಿಯ ಬರ್ಬರ ಹತ್ಯೆ

author img

By

Published : Sep 25, 2021, 1:22 PM IST

Updated : Sep 25, 2021, 1:50 PM IST

ಕುಳ್ಳ ವೆಂಕಟೇಶ್

ಬೆಂಗಳೂರಿನ ಕೆ.ಆರ್.ಪುರಂನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. ಮೃತನನ್ನು ಕುಳ್ಳ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಬೆಂಗಳೂರು: ನಗರದ ಹೊರವಲಯದ ಆವಲಹಳ್ಳಿ ಠಾಣಾ ವ್ಯಾಪ್ತಿಯ ಮಾರ್ಗೊಂಡನಹಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. ಮೃತನನ್ನು ರಾಮಮೂರ್ತಿನಗರದ ಬೋವಿ ಕಾಲೋನಿ ನಿವಾಸಿ ಕುಳ್ಳ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಬೆಂಗಳೂರಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಜಮೀನು ವ್ಯಾಜ್ಯ ಸಂಬಂಧ ಕುಳ್ಳ ವೆಂಕಟೇಶ್​ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ವೆಂಕಟೇಶ್​, ಬೈಕ್​ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಆಟೋ ಡಿಕ್ಕಿ ಹೊಡೆದಿದೆ. ವ್ಯಕ್ತಿ ಕೆಳಗೆ ಬೀಳುತ್ತಿದ್ದಂತೆಯೇ, ಐವರು ದುಷ್ಕರ್ಮಿಗಳ ತಂಡ ಲಾಂಗು - ಮಚ್ಚುಗಳಿಂದ ಮಾರಕ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ತಾಳಿಕೋಟೆಯಲ್ಲಿ ಗಂಡನಿಗೆ ಕೈಕೊಟ್ಟು ಪಕ್ಕದ ಮನೆಯವನ ಜತೆ ಪತ್ನಿ ಪರಾರಿ.. ಪತಿ ನೇಣಿಗೆ ಶರಣು

ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ಡಿ. ದೇವ‍ರಾಜ್ ಭೇಟಿ ನೀಡಿದ್ದು, ಹೊಸಕೋಟೆ ತಾಲೂಕಿನ ಡಿವೈಎಸ್​ಪಿ ಉಮಾಶಂಕರ್​ರಿಂದ ಮಾಹಿತಿ ಪಡೆಯುತ್ತಿದ್ದಾರೆ.

Last Updated :Sep 25, 2021, 1:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.