ಹೊಸಕೋಟೆ: ಕವ್ವಾಲಿ ಕಾರ್ಯಕ್ರಮದಲ್ಲಿ ಭಾಗಿಯಾದ ಎಂಟಿಬಿ ನಾಗರಾಜ್

author img

By

Published : Jan 17, 2023, 8:13 PM IST

Updated : Jan 17, 2023, 9:58 PM IST

Qawwali program organized by MTB Nagaraj

ಸಚಿವ ಎಂಟಿಬಿ ನಾಗರಾಜ ಕವ್ವಾಲಿ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದು ಕ್ಷೇತ್ರದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ.

ಎಂಟಿಬಿ ನಾಗರಾಜ್ ಅವರಿಂದ ಕವ್ವಾಲಿ ಕಾರ್ಯಕ್ರಮ ಆಯೋಜನೆ

ಹೊಸಕೋಟೆ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಪಕ್ಷಗಳು, ಎಂಎಲ್​ಗಳು ಮತದಾರರನ್ನು ಸೆಳೆಯಲು ಈಗಿನಿಂದಲೇ ಕಸರತ್ತು ಆರಂಭಿಸಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್​ ಕವ್ವಾಲಿ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದಾರೆ.

ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಕವ್ವಾಲಿ ಕಾರ್ಯಕ್ರಮಕ್ಕೆ ಬಂದ ಸಚಿವರು ಹಾಗೂ ಎಂಟಿಬಿ ಮಗ ನಿತಿನ್ ಪುರುಷೋತ್ತಮ್ ತಲೆ ಮೇಲೆ ಟೋಪಿ ಹಾಕಿಕೊಂಡು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಅನ್ಯ ಸಮುದಾಯದ ಜನರು ಭಾಗಿಯಾಗಿದ್ದು, ಮಧ್ಯರಾತ್ರಿವರೆಗೂ ಸಚಿವ ಎಂಟಿಬಿ ನಾಗರಾಜ್ ಕಾರ್ಯಕ್ರಮದಲ್ಲಿಯೇ ಇದ್ದರು. ಜತೆಗೆ ಉರ್ದು‌ ಭಾಷೆಯಲ್ಲೆ ಭಾಷಣ ಆರಂಭಿಸಿದ ಸಚಿವ ಎಂಟಿಬಿ ಮುಸ್ಲಿಂ ಸಮುದಾಯವನ್ನು ಒಲೈಸುವ ಮಾತುಗಳನ್ನು ಆಡಿದ್ದಾರೆ.

ಕಾರ್ಯಕ್ರಮ ಆರಂಭದಿಂದ ಕೊನೆಯವರೆಗೂ ಟೋಪಿ ಹಾಕಿಕೊಂಡೇ ಸಚಿವ ಮತ್ತು ಅವರ ಮಗ ಕುಳಿತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಇನ್ನೂ ಇದೇ ಕವ್ವಾಲಿ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಸಚಿವರ ಪುತ್ರ ಮತ್ತು ಕವ್ವಾಲಿ ಗಾಯಕನಿಗೆ ನೋಟುಗಳಿಂದ ದೃಷ್ಟಿ ತೆಗೆದು ಅವರ ತಲೆ ಮೇಲೆ ಸುರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧದ ಚರ್ಚೆ ನಡೆಯುವಂತೆ ಮಾಡಿದೆ.

BJP Leaders Pressmeet
ಬಿಜೆಪಿ ನಾಯಕರಿಂದ ಸುದ್ದಿಗೋಷ್ಠಿ

ನಾ‌ ನಾಯಕಿ ಕಾರ್ಯಕ್ರಮ‌ ವೋಟಿಗಾಗಿ ಗಿಮಿಕ್ - ಮಂಗಳ ಸೋಮಶೇಖರ್​ ಟೀಕೆ(ಮೈಸೂರು): ಕಾಂಗ್ರೆಸ್‌ನವರು ಚುನಾವಣೆ ಗಿಮಿಕ್‌ಗಾಗಿ ಮಹಿಳೆಯರಿಗೆ 2 ಸಾವಿರ ನೀಡುವ ಯೋಜನೆ ಘೋಷಣೆ ಮಾಡಿದ್ಧಾರೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳ ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ. ಬೆಂಗಳೂರಿನಲ್ಲಿ ನಡೆದ ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್‌ನವರು, ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡುವ ಘೋಷಣೆ ಮಾಡಿರುವುದು ಮಹಿಳೆಯರ ಮೂಗಿಗೆ ತುಪ್ಪ ಸವರುವ ಕೆಲಸವೇ ಹೊರತು ಬೇರೇನೂ ಅಲ್ಲ. ಮಹಿಳೆಯರಿಗೆ ಬಿಜೆಪಿ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ, ಮಹಿಳಾ ಪರ ಯೋಜನೆಗಳನ್ನು ಜಾರಿ ಮಾಡಿದ್ದೇ ಬಿಜೆಪಿ ಎಂದರು.

ಕಾಂಗ್ರೆಸ್‌ನವರು ಚುನಾವಣಾ ಗಿಮಿಕ್ ಆಗಿ 2 ಸಾವಿರ ನೀಡುವ ಘೋಷಣೆ ಮಾಡಿದ್ದಾರೆ. ಆದರೆ, ಎಲ್ಲಿಂದ ನೀಡುತ್ತೇವೆ ಎಂದು ಹೇಳಿಲ್ಲ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಪ್ರಿಯಾಂಕಾ ಗಾಂಧಿ ತಮ್ಮ ಹಣ ನೀಡುತ್ತಾರೆಯೇ? ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಕಾಂಗ್ರೆಸ್ ಸುಳ್ಳು ಭರವಸೆಗಳ ಮೂಲಕ ಮಹಿಳೆಯರನ್ನು ಸೆಳೆಯಲು ಯತ್ನಿಸುತ್ತಿದೆ. ಆದರೆ, ಮಹಿಳೆಯರು ಸತ್ಯಾಂಶವನ್ನು ತಿಳಿಯಬೇಕು ಎಂದರು.

ಸರ್ಕಾರದ ಸಾಧನೆ ಬಣ್ಣಿಸಿದ ಸೋಮಶೇಖರ್​: ಇನ್ನೂ, ಮುಸ್ಮಿಂ ಮಹಿಳೆಯರ ನಡೆಯುತ್ತಿದ್ದ ಶೋಷಣೆ ತಡೆಯಲು ತ್ರಿಬಲ್ ತಲಾಖ್ ರದ್ದು ಮಾಡಿದ್ದು ನಮ್ಮದೇ ಸರ್ಕಾರ. ಭಾಗ್ಯಲಕ್ಷ್ಮೀ ಯೋಜನೆ ಜಾರಿ ಮಾಡಿದ್ದು ಯಡಿಯೂರಪ್ಪ. ಹೀಗೆ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ನೀಡಿದೆ. ಬಿಜೆಪಿ ದೇಶದಲ್ಲಿ ಮಹಿಳೆ ಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಉಪ ಮೇಯರ್ ಡಾ.ಜಿ. ರೂಪಾ ಮಾತನಾಡಿ, ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಬೇಟಿ ಬಚಾವೋ, ಬೇಟಿ ಪಡಾವೋ, ಪೋಷಣ್ ಅಭಿಯಾನ, ಮಾತೃವಂದನಾ, ಸ್ವಾವಲಂಬನೆಗಾಗಿ ಮುದ್ರಾ ಯೋಜನೆ, ಜಲಜೀವನ ಮಿಷನ್ ಅಡಿ ಕುಡಿಯುವ ನೀರು, ಸೇನೆಯಲ್ಲಿ ಮೀಸಲಾತಿ, ಹೆರಿಗೆ ರಜೆಯನ್ನು 26 ವಾರಗಳಿಗೆ ಏರಿಕೆ ಮಾಡಿದೆ. ಆದರೂ ಬಿಜೆಪಿ ಏನೂ ಮಾಡಿಲ್ಲ ಎಂದು ಆರೋಪಿಸುತ್ತಿರುವುದು ಸರಿಯಲ್ಲ. ಜನರು ನಮ್ಮ ಕೊಡುಗೆಗಳನ್ನು ನೋಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಂದಗಿಯಿಂದ ಜೆಪಿ ನಡ್ಡಾ ಚಾಲನೆ: ಡಾ. ಸಿ.ಎನ್.ಅಶ್ವತ್ಥ ನಾರಾಯಣ

Last Updated :Jan 17, 2023, 9:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.