ಧನ್ನೂರು ಬೋಟ್ ದುರಂತ.. ​ನಾಪತ್ತೆಯಾಗಿದ್ದ ಮೂವರ ಮೃತ ದೇಹ ಪತ್ತೆ..

author img

By

Published : Oct 8, 2021, 3:23 PM IST

dhannur-krishna-river-three-people-dead-body-founddhannur-krishna-river-three-people-dead-body-found

ಕಳೆದ ದಿನ ಧನ್ನೂರ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿವಪ್ಪ(72) ಎಂಬುವರ ಶವ ಪತ್ತೆ ಮಾಡಲು ಬೋಟ್​​ನಲ್ಲಿ ತೆರಳಿದ್ದ ಮೂವರು ವಿದ್ಯುತ್​ ಶಾರ್ಟ್ ಸರ್ಕ್ಯೂಟ್​ನಿಂದ ಸಾವನ್ನಪ್ಪಿದ್ದರು. ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ನಾಪತ್ತೆಯಾಗಿದ್ದವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು..

ಬಾಗಲಕೋಟೆ : ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿಯ ಕೃಷ್ಣಾನದಿಯಲ್ಲಿ ನಡೆದ ಬೋಟ್​​ ದುರಂತಕ್ಕೆ ಸಂಬಂಧಿಸಿ ಇಂದು ಮೂವರ ಮೃತದೇಹಗಳು ಪತ್ತೆಯಾಗಿವೆ.

ಧನ್ನೂರು ಬೋಟ್ ದುರಂತ

ಕಳೆದ ದಿನ ಧನ್ನೂರ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿವಪ್ಪ(72) ಎಂಬುವರ ಶವ ಪತ್ತೆ ಮಾಡಲು ಬೋಟ್​​ನಲ್ಲಿ ತೆರಳಿದ್ದ ಮೂವರು ವಿದ್ಯುತ್​ ಶಾರ್ಟ್ ಸರ್ಕ್ಯೂಟ್​ನಿಂದ ಸಾವನ್ನಪ್ಪಿದ್ದರು. ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ನಾಪತ್ತೆಯಾಗಿದ್ದವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಇದನ್ನು ಓದಿ-ಶಾರ್ಟ್ ಸರ್ಕ್ಯೂಟ್: ಕೃಷ್ಣನದಿಯಲ್ಲಿ ಶವ ಹುಡುಕಲು ಹೋದ ಮೂವರು ದಾರುಣ ಸಾವು

ಇಂದು ಶರಣಪ್ಪ(30), ಯನಮಪ್ಪ(35) ಹಾಗೂ ಬೋಟ್ ಚಾಲಕ ಪರಸಪ್ಪ (30)ಎಂಬುವರ ಮೃತ ದೇಹ ಪತ್ತೆಯಾಗಿವೆ. ಹುನಗುಂದ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.