EXCLUSIVE: ಬೆಳ್ಳಿ ಗೆದ್ದು ಇತಿಹಾಸ ರಚಿಸಿದ ಕಿಡಂಬಿ ಶ್ರೀಕಾಂತ್​ ಜೊತೆ ಈಟಿವಿ ಭಾರತ್​ ಮಾತು!

author img

By

Published : Dec 25, 2021, 9:01 AM IST

Kidambi Srikanth exclusive interview

ವಿಶ್ವ ಬ್ಯಾಡ್ಮಿಂಟನ್​​ ಚಾಂಪಿಯನ್​ಶಿಪ್​ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದು, ಹೊಸ ದಾಖಲೆ ನಿರ್ಮಾಣ ಮಾಡಿರುವ ಕಿಡಂಬಿ ಶ್ರೀಕಾಂತ್​ ಈಟಿವಿ ಭಾರತ್ ಜೊತೆ ಮಾತನಾಡಿದ್ದು, ತಮ್ಮ ಮನದಾಳ ಹಂಚಿಕೊಂಡಿದ್ದಾರೆ.​​

ಹೈದರಾಬಾದ್​: ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​​​​​​ (BWF World Championships) ಫೈನಲ್​ ಪಂದ್ಯದಲ್ಲಿ ಸೋಲು ಕಂಡರೂ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ಇತಿಹಾಸ ರಚನೆ ಮಾಡಿರುವ ಕಿಡಂಬಿ ಶ್ರೀಕಾಂತ್​ ಈಟಿವಿ ಭಾರತ್​ ಜೊತೆ ಮಾತನಾಡಿದ್ದು, ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ. ಪದಕ ಗೆಲ್ಲುವುದಕ್ಕಾಗಿ ಅಲ್ಲ, ಬದಲಾಗಿ ಉತ್ತಮವಾದ ಪ್ರದರ್ಶನ ನೀಡುವುದರ ಮೇಲೆ ಹೆಚ್ಚು ಕೇಂದ್ರೀಕರಿಸಿರುವುದಾಗಿ ಅವರು ಈ ವೇಳೆ ತಿಳಿಸಿದರು.

ವಿಶ್ವ ಬ್ಯಾಡ್ಮಿಂಟನ್​​​ ಚಾಂಪಿಯನ್​ಶಿಪ್​​​​ನಲ್ಲಿ ಬೆಳ್ಳಿ ಪದಕ ಗೆದ್ದ ನನಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಟ್ವೀಟ್​​ ಮಾಡಿರುವುದು ನೋಡಿ ತುಂಬಾ ಸಂತೋಷವಾಯಿತು ಎಂದಿರುವ ಕಿಡಂಬಿ ಶ್ರೀಕಾಂತ್​​, ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಿ ಆಡಲು ಪ್ರೇರೇಪಣೆ ನೀಡುತ್ತದೆ ಎಂದರು.

ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರನೆಂಬ ಸಾಧನೆ ನಿರ್ಮಿಸಿರುವ ಕಿಡಂಬಿ, 2024ರ ಪ್ಯಾರೀಸ್​​​​​ ಒಲಿಂಪಿಕ್ಸ್​​ನಲ್ಲಿ ಪದಕ ಗೆಲ್ಲುವತ್ತ ಗಮನ ಹರಿಸಿದ್ದಾರೆ. ಇದೇ ವಿಚಾರವಾಗಿ ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಇದನ್ನೂ ಓದಿರಿ: Pro Kabaddi League: ತಮಿಳ್​ ತಲೈವಾಸ್​ ವಿರುದ್ಧ ಬೆಂಗಳೂರು ಬುಲ್ಸ್​​ಗೆ ಜಯ

ಸಂದರ್ಶನದ ಆಯ್ದ ಭಾಗ ಇಂತಿದೆ

ಪ್ರಶ್ನೆ: ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಪ್ಲೇಯರ್ ನೀವು, ನಿಮ್ಮ ಪ್ರತಿಕ್ರಿಯೆ ಏನು?

ಸದ್ಯಕ್ಕೆ ಏನನ್ನೂ ಯೋಚಿಸುತ್ತಿಲ್ಲ. ವಿಶ್ವಚಾಂಪಿಯನ್​ಶಿಪ್​ನಲ್ಲಿ ನಾನು ಉತ್ತಮ ಫಾರ್ಮ್​​ನಲ್ಲಿದ್ದೆನು. ಅದರ ಫಲದಿಂದಲೇ ಪದಕ ಗೆಲ್ಲುವುದಕ್ಕೆ ಸಾಧ್ಯವಾಯಿತು ಎಂದಿದ್ದಾರೆ.

ಪ್ರಶ್ನೆ: ಸೆಮಿಫೈನಲ್​​ ಪಂದ್ಯದಲ್ಲಿ ಭಾರತದ ಲಕ್ಷ್ಯಸೇನ್​​ ಅವರನ್ನ ಎದುರಿಸಿದ ಅನುಭವ ಹೇಗಿತ್ತು?

ನಮ್ಮ ದೇಶದ ಪ್ಲೇಯರ್ಸ್​ ವಿರುದ್ಧ ಆಡುವಾಗ ಕಠಿಣತೆ ಇರುತ್ತದೆ. ಪಂದ್ಯದಲ್ಲಿ ಗೆಲ್ಲುವು ಸಾಧಿಸಬೇಕೆಂಬ ಇರಾದೆಯಿಂದ ಆಟವಾಡುತ್ತೇವೆ. ಗೆಲುವು ಸಾಧಿಸಿರುವುದಕ್ಕೆ ಖುಷಿ ಇದೆ. ಪಂದ್ಯ ಮುಗಿದ ನಂತರ ಮಾತನಾಡಿದ್ದೇವೆ. ಆದರೆ, ಪಂದ್ಯಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಅಲ್ಲ.

  • Congratulations Kidambi Srikanth on becoming the first Indian to win a silver medal in men's singles at BWF World Badminton Championship. This is an outstanding feat. Your hard work and dedication are an inspiration for our youth. My best wishes for your bright future!

    — President of India (@rashtrapatibhvn) December 20, 2021 " class="align-text-top noRightClick twitterSection" data=" ">

ಪ್ರಶ್ನೆ: ಫೈನಲ್​​ ಪಂದ್ಯದಲ್ಲಿ ಸೋಲು ಕಂಡಿರುವುದಕ್ಕೆ ವಿಷಾದವಿದೆಯೇ?

ವಿಷಾದವಿಲ್ಲ. ಫೈನಲ್​ನಲ್ಲಿ ನಾನು ಆಡಿದ ರೀತಿ ನನಗೆ ಖುಷಿ ನೀಡಿದೆ. ಆದರೆ, ಇನ್ನೂ ಸ್ವಲ್ಪ ಉತ್ತಮವಾಗಿ ಆಡಬಹುದಿತ್ತು ಎಂದು ಭಾವಿಸುತ್ತೇನೆ. ತಪ್ಪುಗಳಿಂದ ಕಲಿಯಬೇಕಿದೆ ಎಂದರು.

ಪ್ರಶ್ನೆ: ಕೋವಿಡ್​​ನಿಂದ ಸಾಕಷ್ಟು ಟೂರ್ನಿ ರದ್ದುಗೊಂಡು, ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ, ನಿರಾಶೆಗೊಂಡಿದ್ದೀರಿ?

ನಾನು ಸ್ವಲ್ಪ ನಿರಾಶೆಗೊಂಡಿದ್ದೆ. ಆದರೆ, ಆ ಸಮಯದಲ್ಲಿ 7-8 ಪಂದ್ಯಾವಳಿ ರದ್ದಾದ ಕಾರಣ ಏನೂ ಮಾಡಲಾಗಲಿಲ್ಲ. ಒಲಿಪಿಂಕ್ಸ್​ಗೆ ಅರ್ಹತೆ ಪಡೆದುಕೊಳ್ಳಲು ಅಗ್ರ 14ರ ಸ್ಥಾನದಲ್ಲಿರಬೇಕು. ಆದರೆ, ನಾನು 16ನೇ ಸ್ಥಾನದಲ್ಲಿದ್ದೆ. ಆದರೆ ಬಿಡಬ್ಲ್ಯೂಎಫ್​​ ಶ್ರೇಯಾಂಕ್​ ವಿಭಿನ್ನವಾಗಿರುತ್ತದೆ ಎಂದರು.

ಪ್ರಶ್ನೆ: ನಿಮ್ಮ ಮುಂದಿನ ಗುರಿ ಬಗ್ಗೆ ತಿಳಿಸಿ?

2024ರ ಪ್ಯಾರೀಸ್​ ಒಲಿಂಪಿಕ್ಸ್​​ನಲ್ಲಿ ಪದಕ ಗೆಲ್ಲುವುದು ನನ್ನ ಅಂತಿಮ ಗುರಿಯಾಗಿದೆ. ಅದರ ಮೇಲೆ ಗಮನಹರಿಸಿದ್ದು, ಇದರ ಮಧ್ಯೆ ಬರುವ ಕೆಲವೊಂದು ಟೂರ್ನಿಗಳ ಮೇಲೂ ಗಮನ ಹರಿಸಿದ್ದೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.