ಜೂನಿಯರ್​ ರೋಹಿತ್​ ಶರ್ಮಾ ರೀತಿ ಗಿಲ್​ ಕಾಣುತ್ತಾರೆ : ರಮೀಜ್ ರಾಜಾ

author img

By

Published : Jan 22, 2023, 10:54 PM IST

Shubman Gill

ಗಿಲ್​ ಅವರ ಬ್ಯಾಟಿಂಗ್​ ಪ್ರದರ್ಶನವನ್ನು ಪಾಕಿಸ್ತಾನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್​ ರಾಜಾ ಜೂನಿಯರ್​ ರೋಹಿತ್​ ಶರ್ಮಾ ಎಂದು ಪ್ರಶಂಸಿಸಿದ್ದಾರೆ.

ನವದೆಹಲಿ: ಬ್ಯಾಕ್​ ಟು ಬ್ಯಾಕ್​ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿರುವ ಶುಭಮನ್​ ಗಿಲ್​ ಆಟಕ್ಕೆ ಎಲ್ಲಾ ಕ್ರಿಕೆಟ್​ ಪ್ರೇಮಿಗಳು ತಲೆ ಬಾಗುತ್ತಿದ್ದಾರೆ. ಅಲ್ಲದೇ ಕ್ರಿಕೆಟ್​ ದಿಗ್ಗಜರೂ ಸಹ ದ್ವಿಶತಕ ವೀರನ ರನ್​ಗಳಿಕೆ ಬಗ್ಗೆ ಹೋಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಈಗ ಪಾಕಿಸ್ತಾನ ಆಟಗಾರ ಹಾಗು ಪಾಕಿಸ್ತಾನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್​ ರಾಜಾ ಗಿಲ್​ ಅವರನ್ನು ಜೂನಿಯರ್​ ರೋಹಿತ್​ ಶರ್ಮಾ ಎಂದು ಹೇಳುವ ಮೂಲಕ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಐಸಿಸಿ ರ್‍ಯಾಂಕಿಂಗ್​ನಲ್ಲಿ 26ನೇ ಸ್ಥಾನದಲ್ಲಿರುವ ಗಿಲ್​ ಅವರ ಬಗ್ಗೆ ಯೂಟ್ಯೂಬ್​ ಚಾನೆಲ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಮೀಜ್​ ಮಾತನಾಡಿದ್ದಾರೆ. 'ಶುಭಮನ್​ ಗಿಲ್​ ಮಿನಿ - ರೋಹಿತ್ ಶರ್ಮಾ ಅವರಂತೆ ಕಾಣುತ್ತಾರೆ. ಅವರಿಗೆ ಸಾಕಷ್ಟು ಸಾಮರ್ಥ್ಯವಿದೆ. ಅವರ ಬಳಿ ಇನ್ನಷ್ಟೂ ಅವಕಾಶ ಹಾಗೂ ಸಮಯ ಇದೆ. ಅವರ ಬ್ಯಾಟಿಂಗ್​ ಕೌಶಲ ಉತ್ತಮವಾಗಿದ್ದು, ದ್ವಿಶತಕದ ಆಟದಲ್ಲಿ ಅವರು ಪ್ರತೀ ಬಾಲ್​ನ್ನು ಸರಿಯಾಗಿ ಎದುರಿಸಿದ್ದಾರೆ' ಎಂದು ಹೇಳಿದ್ದರೆ.

ಹೈದರಾಬಾದ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತದ ಐದನೇ ಬ್ಯಾಟರ್​ ಆಗಿ ದ್ವಿಶತಕ ದಾಖಲಿಸಿದರು. ರಾಯ್‌ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ 109 ರನ್‌ಗಳ ಭಾರತದ ಯಶಸ್ವಿ ಚೇಸ್‌ನಲ್ಲಿ ಗಿಲ್ ಅಜೇಯ 40 ರನ್ ಗಳಿಸಿದರು. ರೋಹಿತ್ ಈ ಪಂದ್ಯದಲ್ಲಿ 51 ರನ್‌ಗಳೊಂದಿಗೆ ಅಗ್ರ ಸ್ಕೋರ್ ಮಾಡಿದ್ದರು. ' 109 ರನ್​ ಗುರಿಯನ್ನು ಸುಲಭವಾಗಿ ಹಿಮ್ಮೆಟ್ಟಿಸಿತು ಇದಕ್ಕೆ ಮುಖ್ಯ ಕಾರಣ ರೋಹಿತ್​ ಶರ್ಮಾರ ಬ್ಯಾಟಿಂಗ್. ಇಂಡಿಯನ್​ ಟೀ ರೋಹಿತ್ ಅವರಂತಹ ಅತ್ಯುತ್ತಮ ಬ್ಯಾಟರ್ ಅನ್ನು ಹೊಂದಿದೆ. ಅವರು ಹುಕ್ ಮತ್ತು ಹೊಡೆತಗಳಿಗೆ ಅದ್ಭುತ ಸ್ಟ್ರೈಕರ್ ಆಗಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಾಜಾ ಹೇಳಿದರು.

ನ್ಯೂಜಿಲೆಂಡ್ ತಂಡ ನೀಡಿದ 109 ರನ್ ಗುರಿಯನ್ನು 20.1 ಓವರ್‌ಗಳಲ್ಲೇ ಟೀಮ್ ಇಂಡಿಯಾ ಸಾಧಿಸಿತ್ತು. ಆ ಮೂಲಕ 179 ಎಸೆತಗಳು ಬಾಕಿ ಇರುವಾಗಲೇ ಭಾರತ ತಂಡ ಗೆಲುವು ಪಡೆಯಿತು. 2010ರಲ್ಲಿ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ 173 ಎಸೆತಗಳನ್ನು ಉಳಿಸಿಕೊಂಡು ಭಾರತ ತಂಡ ಜಯ ಗಳಿಸಿತ್ತು. ಆ ದಾಖಲೆಯನ್ನು ಇದೀಗ ರೋಹಿತ್ ಪಡೆ ರಾಯ್ಪುರ್‌ ಪಂದ್ಯದಲ್ಲಿ ಮುರಿದಿದೆ. ಆ ಪಂದ್ಯದಲ್ಲೂ ಭಾರತ ತಂಡ 8 ವಿಕೆಟ್ ಗೆಲುವು ಸಾಧಿಸಿತ್ತು. 1994 ರಲ್ಲಿ ಆಕ್ಲೆಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 160 ಎಸೆತಗಳ ಅಂತರದಿಂದ ಭಾರತ ತಂಡ ಜಯಿಸಿತ್ತು.

ಶನಿವಾರ, ಮೊಹಮ್ಮದ್ ಶಮಿ ನೇತೃತ್ವದ ಭಾರತದ ಬೌಲರ್‌ಗಳು ನ್ಯೂಜಿಲೆಂಡ್ ಅನ್ನು 108 ರನ್‌ಗಳಿಗೆ ಕಟ್ಟಿಹಾಕಿದರು. ಸರಣಿ ಸಮಬಲ ಸಾಧಿಸುವ ಗುರಿಯಲ್ಲಿದ್ದ ಕಿವೀಸ್​ಗೆ ಅಲ್ಪಮೊತ್ತಕ್ಕೆ ತಲೆಬಾಗಿತು. 15 ರನ್​ಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಕಿವೀಸ್​ಗೆ ಆಸರೆ ಆದದ್ದು ಕೆಳ ಕ್ರಮಾಂಕದ ಫಿಲಿಪ್​, ಬ್ರೇಸ್ವೆಲ್ ಮತ್ತು ಸ್ಯಾಂಟ್ನರ್​. ಶಮಿ 3 ವಿಕೆಟ್​, ಹಾರ್ದಿಕ್​, ಸುಂದರ್​ ತಲಾ ಎರಡು ಮತ್ತು ಶಾರ್ದೂಲ್​, ಕುಲ್​ದೀಪ್​ ಮತ್ತು ಸಿರಾಜ್​ ತಲಾ ಒಂದು ವಿಕೆಟ್​ ಕಬಳಿಸಿದರು.

ಭಾರತೀಯ ವೇಗದ ಬೌಲರ್​ಗಳು ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಉತ್ತಮ ಬೌಲಿಂಗ್​ ಪ್ರದರ್ಶನದಿಂದ ನ್ಯೂಜಿಲೆಂಡ್​ ವಿರುದ್ಧದ ಎರಡನೇ ಪಂದ್ಯವನ್ನು ಭಾರತ ಜಯಿಸಿತು. ಭಾರತೀಯ ಬೌಲರ್‌ಗಳು ಹೆಚ್ಚಿನ ವೇಗದಲ್ಲಿ ಬೌಲಿಂಗ್​ ಮಾಡುವುದಿಲ್ಲ. ಆದರೆ ಲೈನ್​ ಮತ್ತು ಲೆಂತನ್ನು ಉತ್ತಮವಾಗಿ ಕಾಯ್ದುಕೊಳ್ಳುತ್ತಾರೆ ಎಂದು ರಾಜಾ ಹೇಳಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿ ಕ್ಲೀನ್​ ಸ್ವೀಪ್​ ಮಾಡಿದರೆ ಭಾರತವೇ ಏಕದಿನ ಶ್ರೇಯಾಂಕದಲ್ಲಿ ನಂ. 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.