ರಾತ್ರೋರಾತ್ರಿ ಸ್ಟಾರ್​ ಆದ ಹೀರೋಗೆ ಕೆಕೆಆರ್ ಮಣೆ... 20 ಲಕ್ಷದಿಂದ 8 ಕೋಟಿ ರೂ.ಗೆ ಅಯ್ಯರ್​ ರಿಟೈನ್​

author img

By

Published : Nov 30, 2021, 11:00 PM IST

KKR retain Venkatesh Iyer

ಇಂಡಿಯನ್​ ಪ್ರೀಮಿಯರ್ ಲೀಗ್​​ನ ಪ್ರತಿ ಆವೃತ್ತಿಯಲ್ಲೂ ಹೊಸ ಹೊಸ ಪ್ರತಿಭೆ ಹುಟ್ಟಿಕೊಳ್ಳುತ್ತವೆ. ಎಲೆಮರೆಕಾಯಿಯಂತಿದ್ದ ಪ್ರತಿಭೆ ರಾತ್ರೋರಾತ್ರಿ ಸ್ಟಾರ್​ ಆಗ್ತಿದ್ದು, ಅವರಿಗೆ ಇದೀಗ ಮುಂದಿನ ವರ್ಷದ ಆವೃತ್ತಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗ್ತಿದೆ.​

ಮುಂಬೈ: 2021ರ ಇಂಡಿಯನ್​ ಪ್ರೀಮಿಯರ್ ಲೀಗ್​ ದ್ವೀತಿಯಾರ್ಧದಲ್ಲಿ ರಾತ್ರೋರಾತ್ರಿ ಸ್ಟಾರ್​ ಆದ ಯುವ ಪ್ರತಿಭೆ ವೆಂಕಟೇಶ್​ ಅಯ್ಯರ್​ಗೆ ಕೆಕೆಆರ್​ ರಿಟೈನ್ ಮಾಡಿಕೊಂಡಿದ್ದು, ಇದಕ್ಕಾಗಿ ಬರೋಬ್ಬರಿ 8 ಕೋಟಿ ರೂ. ಖರ್ಚು ಮಾಡಿದೆ.

2021ರ ಐಪಿಎಲ್​ ಹರಾಜಿನಲ್ಲಿ ಮೂಲ ಬೆಲೆ 20 ಲಕ್ಷ ರೂ. ನೀಡಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಯುವ ಆಲ್​ರೌಂಡರ್​ ವೆಂಕಟೇಶ್​ ಅಯ್ಯರ್​ಗೆ ಮಣೆ ಹಾಕಿತ್ತು. ಭಾರತದಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದ ಅಯ್ಯರ್​, ತಂದನಂತರ ದುಬೈನಲ್ಲಿ ಆರ್​​ಸಿಬಿ ವಿರುದ್ಧ ನಡೆದ ದ್ವೀತಿಯಾರ್ಧದ ಪಂದ್ಯದಲ್ಲಿ ಅವಕಾಶ ಪಡೆದುಕೊಂಡಿದ್ದರು. ಈ ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ 41ರನ್​ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದಾದ ಬಳಿಕ ಅನೇಕ ಪಂದ್ಯಗಳಲ್ಲಿ ಮಿಂಚಿ ತಂಡವನ್ನ ಗೆಲುವಿನ ದಢ ಸೇರಿಸಿದ್ದರು.

ಇವರ ಪ್ರದರ್ಶನಕ್ಕೆ ಬೆರಗಾಗಿರುವ ಭಾರತೀಯ ಕ್ರಿಕೆಟ್ ಮಂಡಳಿ ನ್ಯೂಜಿಲ್ಯಾಂಡ್​​ ವಿರುದ್ಧದ ಟಿ-20 ಸರಣಿಗೂ ಆಯ್ಕೆ ಮಾಡಿತ್ತು. ಇದೀಗ ಕೋಲ್ಕತ್ತಾ ನೈಟ್​ ರೈಡರ್ಸ್ ಬರೋಬ್ಬರಿ 8 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ.

ಇದನ್ನೂ ಓದಿರಿ: ಕನ್ನಡಿಗನಿಗೆ ಜಾಕ್​ಪಾಟ್​​: 1 ಕೋಟಿಯಿಂದ 12 ಕೋಟಿ ರೂ.ಗೆ ರಿಟೈನ್​​ ಆದ​ ಮಯಾಂಕ್​

ಇದರ ಜೊತೆಗೆ ವೆಸ್ಟ್​​ ಇಂಡೀಸ್​​ನ ಆಲ್​ರೌಂಡರ್​ ಆ್ಯಂಡ್ರೆ ರಸೆಲ್​​ 12 ಕೋಟಿ, ವರುಣ್​ ಚಕ್ರವರ್ತಿಗೆ 8 ಕೋಟಿ ರೂ ಹಾಗೂ ಸುನಿಲ್​ ನರೈನ್​ಗ 6 ಕೋಟಿ ರೂ. ನೀಡಿ ತನ್ನ ಬಳಿ ಉಳಿಸಿಕೊಂಡಿದೆ. ಉಳಿದಂತೆ ಶುಬ್ಮನ್ ಗಿಲ್​, ಶಕೀಬ್​ ಅಲ್​ ಹಸನ್​​,ನಿತೀಶ್ ರಾಣಾ, ಕಮ್ಮಿನ್ಸ್​​​​,ರಾಹುಲ್​ ತ್ರಿಪಾಠಿ ಹಾಗೂ ದಿನೇಶ್ ಕಾರ್ತಿಕ್​ನಂತಹ ಪ್ಲೇಯರ್ಸ್​​ಗೆ ಕೈಬಿಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.