ತಂಡದ ನಿರೀಕ್ಷೆಗೆ ತಕ್ಕಂತೆ ಆಡುತ್ತೇನೆ, ಬ್ಯಾಟಿಂಗ್​ನಲ್ಲಿ ಬದಲಾವಣೆ ಮಾಡಿಕೊಳ್ಳಲ್ಲ: ಐಯ್ಯರ್​

author img

By

Published : Oct 14, 2021, 5:28 AM IST

I am doing what has been asked of me, says Iyer

ಕಳೆದ ಎರಡು ಪಂದ್ಯಗಳಲ್ಲಿ ಕೊನೆಯವರೆಗೂ ಕ್ರೀಸ್​ನಲ್ಲಿರಲು ಬಯಸಿದ್ದರಿಂದ ಬ್ಯಾಟಿಂಗ್​ ಆಕ್ರಮಣಶೀಲತೆಯ ನಿರ್ಬಂಧಕ್ಕೆ ಪ್ರಯತ್ನಿಸಿದ್ದೆ. ಆದರೆ ಅದು ನನಗೆ ಹೊಂದಾಣಿಕೆ ಆಗುವುದಿಲ್ಲ ಎಂಬುದನ್ನು ನಾನು ಅರಿತುಕೊಂಡಿದ್ದೇನೆ ಎಂದು ಬ್ಯಾಟರ್​ ವೆಂಕಟೇಶ್​ ಅಯ್ಯರ್​ ಹೇಳಿದ್ದಾರೆ.

ಶಾರ್ಜಾ: ತಂಡವು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗೆ ತಕ್ಕಂತೆ ಆಡುತ್ತಿದ್ದೇನೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಹೇಳಿದ್ದಾರೆ. ಡೆಲ್ಲಿ ವಿರುದ್ಧ 2ನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ(55) ಬಾರಿಸಿ ಕೆಕೆಆರ್​ ಫೈನಲ್​ ತಲುಪುವಲ್ಲಿ ನೆರವಾದ ಅಯ್ಯರ್​​ ಪಂದ್ಯದ ಬಳಿಕ ಸಂತಸ ಹಂಚಿಕೊಂಡರು.

ತಂಡದ ನಿರೀಕ್ಷೆಯಂತೆ ನಾನು ಆಡುತ್ತಿದ್ದು, ಗೆಲುವಿನೊಂದಿಗೆ ಪಂದ್ಯ ಕೊನೆಗೊಳಿಸಿರುವುದು ತುಂಬಾ ಸಂತೋಷವಾಗಿದೆ. ಮೈದಾನದಲ್ಲಿ ನನಗಿಷ್ಟದಂತೆ ಬ್ಯಾಟಿಂಗ್​ ಮಾಡಲು ಬಯಸುತ್ತೇನೆ, ಅದರಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ. ನನಗೆ ಈ ಅವಕಾಶ ನೀಡಿದ ಮ್ಯಾನೇಜ್​ಮೆಂಟ್​​ಗೆ ಕೃತಜ್ಞನಾಗಿದ್ದೇನೆ. ಶಾರ್ಜಾ ಕ್ರಿಕೆಟ್​ಗೆ ಅದ್ಭುತವಾದ ಸ್ಥಳ ಎಂದು ಅಯ್ಯರ್​ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ಅವರು, ಕಳೆದ ಎರಡು ಪಂದ್ಯಗಳಲ್ಲಿ ಕೊನೆಯವರೆಗೂ ಕ್ರೀಸ್​ನಲ್ಲಿರಲು ಬಯಸಿದ್ದರಿಂದ ಬ್ಯಾಟಿಂಗ್​ ಆಕ್ರಮಣಶೀಲತೆಯ ನಿರ್ಬಂಧಕ್ಕೆ ಪ್ರಯತ್ನಿಸಿದ್ದೆ. ಆದರೆ ಅದು ನನಗೆ ಹೊಂದಾಣಿಕೆ ಆಗುವುದಿಲ್ಲ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಅಲ್ಲದೆ, ಆ ಯತ್ನದಲ್ಲಿ ನಾನು ವಿಫಲವಾಗಿರುವುದು ಗೊತ್ತಿದೆ ಎಂದರು.

ಐಪಿಎಲ್​ ಬಳಿಕ ಪುರುಷರ ಟಿ-20 ವಿಶ್ವಕಪ್‌ಗಾಗಿ ಭಾರತೀಯ ತಂಡದ ಬಯೋಬಬಲ್​ನಲ್ಲಿ ಇರುವಂತೆ ಬಿಸಿಸಿಐ ಕರೆನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯ ನಾನು ಭಾರತೀಯ ತಂಡದ ಬಗ್ಗೆ ಯೋಚಿಸುತ್ತಿಲ್ಲ, ಇನ್ನೂ ಒಂದು ಪಂದ್ಯವಿದೆ. ಅದರ ಮೇಲೆ ಸಂಪೂರ್ಣ ಗಮನಹರಿಸಲು ಬಯಸುತ್ತೇನೆ" ಎಂದು ಹೇಳಿದರು.

ಡೆಲ್ಲಿ ವಿರುದ್ಧ 3 ವಿಕೆಟ್​ಗಳಿಂದ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಐಪಿಎಲ್ ಫೈನಲ್‌ಗೆ ತಲುಪಿದೆ. ಶುಕ್ರವಾರ ದುಬೈನಲ್ಲಿ ನಡೆಯಲಿರುವ ಫೈನಲ್​ನಲ್ಲಿ ಟ್ರೋಫಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.

ಇದನ್ನೂ ಓದಿ: 'ಮಾತನಾಡಲು ನನ್ನ ಬಳಿ ಪದಗಳೇ ಇಲ್ಲ': KKR​ ವಿರುದ್ಧ ಸೋತ ಬಳಿಕ ಭಾವುಕರಾದ ಪಂತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.