IPL 2022: ಸಿಎಸ್​ಕೆಯಿಂದ ಧೋನಿ, ಜಡೇಜಾ, ಋತುರಾಜ್ ರಿಟೈನ್, ​ಲಕ್ನೋ ತಂಡಕ್ಕೆ ರಾಹುಲ್​ ಕ್ಯಾಪ್ಟನ್

author img

By

Published : Nov 24, 2021, 10:01 PM IST

Updated : Nov 24, 2021, 10:18 PM IST

IPL 2022

ಇಂಡಿಯನ್​ ಪ್ರೀಮಿಯರ್ ಲೀಗ್​ನ ಮುಂದಿನ ಆವೃತ್ತಿಗಾಗಿ ಎಲ್ಲ ತಂಡಗಳು ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದು, ಯಾವೆಲ್ಲ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿವೆ. ಇದರ ಮಧ್ಯೆ ಕೆಲವೊಂದು ತಂಡಗಳು ಉಳಿಸಿಕೊಳ್ಳಬಹುದಾದ ಪ್ಲೇಯರ್ಸ್​ಗಳ ಮಾಹಿತಿ ಇಂತಿದೆ.

ಹೈದರಾಬಾದ್​: ಇಂಡಿಯನ್​​ ಪ್ರೀಮಿಯರ್ ಲೀಗ್​ನ 2022ನೇ ಸಾಲಿನ ಆವೃತ್ತಿಗೋಸ್ಕರ ಬಿಸಿಸಿಐ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಶುರು ಮಾಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಂದಿನ ವರ್ಷ ಏಪ್ರಿಲ್ 2ರಿಂದ ಐಪಿಎಲ್​ 2022ರ ಆವೃತ್ತಿ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಸೂರ್ಯಕುಮಾರ್ ಯಾದವ್​
ಸೂರ್ಯಕುಮಾರ್ ಯಾದವ್​

2022ರ ಐಪಿಎಲ್​ಗೋಸ್ಕರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, 8 ಪ್ರಾಂಚೈಸಿಗಳು ಕೇವಲ ನಾಲ್ವರು ಆಟಗಾರರನ್ನು ರಿಟೈನ್​​ ಮಾಡಲು ಅವಕಾಶ ನೀಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಿಎಸ್​ಕೆ ಮುಂದಿನ ಮೂರು ಸೀಸನ್​​ಗಳಿಗಾಗಿ ಧೋನಿ ಅವರನ್ನು ರಿಟೈನ್​ ಮಾಡಿಕೊಳ್ಳಲಿದ್ದು, ಇದರ ಜೊತೆಗೆ 2021ರ ಐಪಿಎಲ್​​ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿರುವ ಜಡೇಜಾ ಮತ್ತು ಗಾಯಕ್ವಾಡ್​​ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆಂದು ತಿಳಿದು ಬಂದಿದೆ. ಇದರ ಜೊತೆಗೆ, ಇಂಗ್ಲೆಂಡ್​ ಆಲ್​ರೌಂಡರ್ ಮೊಯಿನ್​ ಅಲಿ ಅಥವಾ ಮಧ್ಯಮ ವೇಗಿ ಸ್ಯಾಮ್​ ಕರ್ರನ್​ಗೆ ಮಣೆ ಹಾಕಲಿದೆ. ಇದೇ ಮೊದಲ ಸಲ ಸುರೇಶ್​​ ರೈನಾ ಅವರನ್ನು ಕೈಬಿಡಲು ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಡೆಲ್ಲಿ ಕ್ಯಾಪಿಟಲ್ಸ್​​ ವಿಕೆಟ್ ಕೀಪರ್ ಬ್ಯಾಟರ್​​ ರಿಷಬ್​ ಪಂತ್​, ಆಲ್​ರೌಂಡರ್​ ಅಕ್ಷರ್ ಪಟೇಲ್​, ಪೃಥ್ವಿ ಶಾ ಮತ್ತು ವೇಗಿ ಅನ್ರಿಚ್​ ನಾರ್ಟ್ಜೆ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಶ್ರೇಯಸ್​​ ಅಯ್ಯರ್​ಗೆ ತಂಡ ಕೈಬಿಡುವ ಸಾಧ್ಯತೆ ಇದೆ.

ರಿಷಭ್ ಪಂತ್​
ರಿಷಭ್ ಪಂತ್​

ಇದನ್ನೂ ಓದಿ: ಮೋದಿ ಭೇಟಿ ಮಾಡಿದ ಸಿಎಂ ಮಮತಾ: ಬಿಎಸ್​​ಪಿ ವ್ಯಾಪ್ತಿ ವಿಸ್ತರಣೆ ಹಿಂಪಡೆಯಲು ಮನವಿ

ಮುಂಬೈ ಇಂಡಿಯನ್ಸ್​ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದು, ಇದರ ಜೊತೆಗೆ, ವೆಸ್ಟ್​ ಇಂಡೀಸ್​ನ ಆಲ್​ರೌಂಡರ್​ ಕೀರನ್​ ಪೊಲಾರ್ಡ್​ಗೆ ಮಣೆ ಹಾಕುವ ಸಾಧ್ಯತೆ ಇದೆ. ಸ್ಪೋಟಕ ಆಟಗಾರ ಸೂರ್ಯಕುಮಾರ್​ ಯಾದವ್​​ ಅವರನ್ನು ಹರಾಜು ಪೂಲ್​​ನಿಂದ ಖರೀದಿ ಮಾಡುವ ಸಾಧ್ಯತೆ ದಟ್ಟವಾಗಿದ್ದು, ವಿಕೆಟ್​ ಕೀಪರ್ ಇಶಾನ್​ ಕಿಶನ್​ಗೆ ಉಳಿಸಿಕೊಳ್ಳಬಹುದು.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

2022ರ ಐಪಿಎಲ್​​ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿದ್ದು, ಸಂಜೀವ್​ ಗೋಯೆಂಕಾ ಮಾಲೀಕತ್ವದ ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್​ ಕ್ಯಾಪ್ಟನ್​ ಆಗುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾತುಕತೆ ಸಹ ನಡೆದಿದೆ ಎಂದು ತಿಳಿದು ಬಂದಿದೆ.

ವೆಂಕಟೇಶ್​ ಅಯ್ಯರ್​
ವೆಂಕಟೇಶ್​ ಅಯ್ಯರ್​

ಕೋಲ್ಕತ್ತಾ ನೈಟ್​ ರೈಡರ್ಸ್​​​ ಆಲ್​ರೌಂಡರ್​ಗಳಾದ ಸುನಿಲ್​ ನರೈನ್​, ಆಂಡ್ರೆ ರಸೆಲ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದ್ದು, ವರುಣ್​ ಚಕ್ರವರ್ತಿ ಜೊತೆಗೆ ಶುಬ್ಮನ್ ಗಿಲ್​ ಅಥವಾ ವೆಂಕಟೇಶ್​​ ಅಯ್ಯರ್​ಗೆ ಮಣೆ ಹಾಕುವ ಸಾಧ್ಯತೆ ಇದೆ.

Last Updated :Nov 24, 2021, 10:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.