5ನೇ ಟೆಸ್ಟ್‌ ರದ್ದಾಗುವುದರಿಂದ ಆಗುವ ನಷ್ಟ ಅಷ್ಟಿಷ್ಟಲ್ಲ: ಬಿಸಿಸಿಐನಿಂದ ಬಿಸಿ ಬಿಸಿ ಚರ್ಚೆ

author img

By

Published : Sep 11, 2021, 5:49 PM IST

Ganguly to travel to England on Sept 22, meet with ECB to discuss rescheduling

ದಿಢೀರ್​ ರದ್ದಾದ 5ನೇ ಟೆಸ್ಟ್​ ಪಂದ್ಯವನ್ನು ಬಿಸಿಸಿಐ ಮರುನಿಗದಿ ಮಾಡುವ ಪ್ರಸ್ತಾಪ ಮಾಡಿದ್ದು, ಈ ಬಗ್ಗೆ ಇಸಿಬಿಗೆ ಪತ್ರ ಸಹ ಬರೆದಿದೆ. ಇದಕ್ಕೂ ಮುನ್ನ ಉಭಯ ಮಂಡಳಿ ಸಾಕಷ್ಟು ಚರ್ಚೆ ಸಹ ಮಾಡಿವೆ.

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷ ಸೌರವ್ ಗಂಗೂಲಿ ಸೆ. 22 ರಂದು ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಲಿದ್ದು, ಇಂಗ್ಲೆಂಡ್ ಕ್ರಿಕೆಟ್ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾಡಲಿದ್ದಾರೆ. ಕೊರೊನಾ ಕಾರಣದಿಂದ ಮ್ಯಾಂಚೆಸ್ಟರ್​ನಲ್ಲಿ ನಡೆಯಬೇಕಿದ್ದ 5ನೇ ಟೆಸ್ಟ್‌ ಅನ್ನು ತಾತ್ಕಾಲಿಕ ರದ್ದುಗೊಳಿಸಲಾಗಿದ್ದು, ಅದರ ಮರು ನಿಗದಿ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಐಪಿಎಲ್​​​ ಹಾಗೂ ಹಣಕ್ಕೋಸ್ಕರ ಮ್ಯಾಂಚೆಸ್ಟರ್​ ಟೆಸ್ಟ್​​ ಪಂದ್ಯ ರದ್ಧು : ಮೈಕಲ್​ ವಾನ್​​ ಆರೋಪ

ಇಂಗ್ಲೆಂಡ್ ಮತ್ತು ಭಾರತ ನಡುವಿನ ಸರಣಿಯ 5ನೇ ಮತ್ತು ಅಂತಿಮ ಟೆಸ್ಟ್ ರದ್ದುಗೊಳಿಸುವುದರಿಂದ ಎರಡೂ ತಂಡ ಭಾರಿ ಮೊತ್ತದ ಹಣವನ್ನು ಕಳೆದುಕೊಳ್ಳಲಿವೆ. ಈ ಆರ್ಥಿಕ ಹೊಡೆತ ಸರಿದೂಗಿಸುವ ನಿಟ್ಟಿನಲ್ಲಿ ಸೌರವ್ ಗಂಗೂಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ)ಯ ಪ್ರತಿನಿಧಿಗಳನ್ನು ಭೇಟಿ ಮಾಡಿ ರದ್ದಾದ ಟೆಸ್ಟ್ ​ಅನ್ನು ಮತ್ತೆ ನಡೆಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಇನ್ನು ದಿಢೀರ್​ ರದ್ದಾದ ಪಂದ್ಯವನ್ನು ಬಿಸಿಸಿಐ ಮರುನಿಗದಿ ಮಾಡುವ ಪ್ರಸ್ತಾಪ ಮಾಡಿದ್ದು, ಈ ಬಗ್ಗೆ ಇಸಿಬಿಗೆ ಪತ್ರ ಸಹ ಬರೆದಿದೆ. ಇದಕ್ಕೂ ಮುನ್ನ ಉಭಯ ಮಂಡಳಿ ಸಾಕಷ್ಟು ಬಾರಿ ಚರ್ಚೆ ಸಹ ಮಾಡಿವೆ.

ಇದನ್ನೂ ಓದಿ: 5ನೇ ಟೆಸ್ಟ್‌ ರದ್ದಾದ ಬಳಿಕ 2008ರ ಘಟನೆ ಸ್ಮರಿಸಿ ಇಂಗ್ಲೆಂಡ್‌ ಗುಣಗಾನ ಮಾಡಿದ ಸುನೀಲ್ ಗವಾಸ್ಕರ್!

5ನೇ ಟೆಸ್ಟ್‌ ಮ್ಯಾಂಚೆಸ್ಟರ್​ನಲ್ಲಿ ಸೆ.10 ರಂದ್ದು ನಡೆಯಬೇಕಿತ್ತು. ಪಂದ್ಯ ಆರಂಭಕ್ಕೂ ಮುನ್ನ ಭಾರತದ ತರಬೇತುದಾರರಾದ ರವಿಶಾಸ್ತ್ರೀ, ಆರ್ ಶ್ರೀಧರ್ ಸೇರಿದಂತೆ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿತು. ಇದರ ಬೆನ್ನಲ್ಲೆ ಟೀಂ ಇಂಡಿಯಾದ ಫಿಸಿಯೋ ಯೋಗೇಶ್ ಪಾರ್ಮರ್ ಕೂಡ ಕೊರೋನಾ ಸೋಂಕಿಗೆ ಒಳಗಾದರು. ಹೀಗಾಗಿ 5ನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ಹಿಂದೆ ಸರಿಯಬೇಕಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.