7 ತಿಂಗಳ ಏಳುಬೀಳಿನ ಪಯಣ: ಗಾಯದಿಂದ ಚೇತರಿಸಿಕೊಂಡು ಟೆಸ್ಟ್​ ಕ್ಯಾಪ್​ ಧರಿಸಿದ ಅಯ್ಯರ್

author img

By

Published : Nov 25, 2021, 4:11 PM IST

Shreyas Iyer

ಪುಣೆಯಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ವೇಳೆ ಬಿದ್ದು ಭುಜದ ಗಾಯಕ್ಕೆ ಒಳಗಾಗಿದ್ದ ಶ್ರೇಯಸ್​ ನಂತರ ಮೈದಾನದಿಂದ ಸಾಕಷ್ಟು ಸಮಯ ಹೊರಗುಳಿದಿದ್ದರು. ಇಂಗ್ಲೆಂಡ್​ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಅವರು ಈ ವೇಳೆ ಮೊದಲಾರ್ಧದ ಐಪಿಎಲ್ ಮತ್ತು ರಾಯಲ್​ ಲಂಡನ್​ ಏಕದಿನ ಟ್ರೋಫಿಯಲ್ಲಿ ಆಡುವುದನ್ನೂ ತಪ್ಪಿಸಿಕೊಂಡಿದ್ದರು.

ಕಾನ್ಪುರ: ಕ್ರಿಕೆಟ್​ನಲ್ಲಿ ಗಾಯ ಸಂಭವಿಸುವುದು ಸಾಮಾನ್ಯ. ಆದರೆ ಗಾಯಗೊಂಡಿದ್ದರಿಂದ ತಂಡದಿಂದ ಹೊರಬಿದ್ದಿದ್ದ ಆಟಗಾರನೊಬ್ಬ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದೆಂದರೇ ಅದು ನಿಜಕ್ಕೂ ದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು.

ಪುಣೆಯಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ವೇಳೆ ಬಿದ್ದು ಭುಜದ ಗಾಯಕ್ಕೆ ಒಳಗಾಗಿದ್ದ ಶ್ರೇಯಸ್​ ನಂತರ ಮೈದಾನದಿಂದ ಸಾಕಷ್ಟು ಸಮಯ ಹೊರಗುಳಿದಿದ್ದರು. ಇಂಗ್ಲೆಂಡ್​ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಈ ವೇಳೆ ಮೊದಲಾರ್ಧದ ಐಪಿಎಲ್ ಮತ್ತು ರಾಯಲ್​ ಲಂಡನ್​ ಏಕದಿನ ಟ್ರೋಫಿಯಲ್ಲಿ ಆಡುವುದನ್ನೂ ತಪ್ಪಿಸಿಕೊಂಡಿದ್ದರು.

ಆದರೆ ದ್ವಿತೀಯಾರ್ಧದ ಐಪಿಎಲ್​ಗೂ ಮುನ್ನ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ನಂತರ ಡೆಲ್ಲಿ ಕ್ಯಾಪಿಟಲ್ಸ್ ಪರ ಯುಎಇಯಲ್ಲಿ ನಡೆದ ದ್ವಿತೀಯ ಹಂತದ ಐಪಿಎಲ್​ನಲ್ಲಿ ಆಡಿದರು. ಫಿಟ್​ನೆಸ್​ ಕಂಡುಕೊಂಡ ನಂತರ ಟಿ20 ವಿಶ್ವಕಪ್​ ತಂಡದಲ್ಲೂ ಮೀಸಲು ಆಟಗಾರನಾಗಿ ಅವಕಾಶ ಪಡೆದರು. ಅದಾದ ನಂತರ ಇತ್ತೀಚೆಗೆ ಮುಗಿದ ಕಿವೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲೂ ಭಾರತ ತಂಡದ ಪರ ಆಡಿದರು.

ಆದರೆ ಕೊಹ್ಲಿ, ರೋಹಿತ್ ಶರ್ಮಾ, ಬುಮ್ರಾ ಪಂತ್ ಮತ್ತು ರಾಹುಲ್​ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ 303ನೇ ಆಟಗಾರನಾಗಿ ಟೆಸ್ಟ್​ ಕ್ಯಾಪ್​ ಪಡೆದಿದ್ದಾರೆ. ಕಾನ್ಪುರದಲ್ಲಿ ಮೊದಲ ಪಂದ್ಯಾರಂಭಕ್ಕೂ ಮುನ್ನ ಲೆಜೆಂಡರಿ ಬ್ಯಾಟರ್​ ಸುನೀಲ್ ಗವಾಸ್ಕರ್​ ಅವರಿಂದ ಟೆಸ್ಟ್​ ಕ್ಯಾಪ್​ ಪಡೆದ ಅವರು ಮೊದಲ ಪಂದ್ಯದಲ್ಲೇ ಬ್ಯಾಟಿಂಗ್​ನಲ್ಲೂ ಯಶಸ್ವಿಯಾಗಿದ್ದಾರೆ.​

ಇದಕ್ಕೂ ಮುನ್ನ ಅಯ್ಯರ್ ಮುಂಬೈ ಪರ 54 ಪ್ರಥಮ ದರ್ಜೆ ಪಂದ್ಯಗಳಿಂದ 4592 ರನ್​ಗಳಿಸಿದ್ದರು. ಇದರಲ್ಲಿ 12 ಶತಕ ಸೇರಿವೆ. ಭಾರತದ ಪರ ಸೀಮಿತ ಓವರ್​ಗಳ ತಂಡದಲ್ಲಿ ಖಾಯಂ ಆಟಗಾರನಾಗಿರುವ ಅವರು 42.7ರ ಸರಾಸರಿಯಲ್ಲಿ 1393 ರನ್​ಗಳಿಸಿದ್ದಾರೆ.

ಪ್ರಸ್ತುತ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಅಯ್ಯರ್​ ತಮ್ಮ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.