ವಿಶ್ವ ಚಾಂಪಿಯನ್‌ಶಿಪ್ ಕಂಚಿಗೆ ತೃಪ್ತಿಯಾಗಿಲ್ಲ.. ಆದರೆ, ಇದು ಭವಿಷ್ಯಕ್ಕೆ ಮೆಟ್ಟಿಲು : ಲಕ್ಷ್ಯ ಸೇನ್

author img

By

Published : Dec 19, 2021, 5:34 PM IST

Karnataka enter Quarter final in Vijaya Hazare trophy

ಇದೊಂದು ತುಂಬಾ ದೊಡ್ಡ ಟೂರ್ನಮೆಂಟ್​ ಮತ್ತು ಈ ರೀತಿ ಹತ್ತಿರಕ್ಕೆ ಬಂದು ಸೋಲು ಕಂಡಾಗ ಅದನ್ನು ಸ್ವೀಕರಿಸುವುದು ತುಂಬಾ ಕಷ್ಟವಾಗುತ್ತದೆ. ನಾನೂ ಕನಿಷ್ಠ ಕಂಚನ್ನಾದರೂ ಗೆದ್ದಿದ್ದೇನೆ. ಆದರೆ, ಇದರಿಂದ ನಾನು ಸಂತೋಷವಾಗಿಲ್ಲ. ಸೆಮಿಫೈನಲ್​ನಲ್ಲಿ ನಾನು ನೀಡಿದ ಪ್ರದರ್ಶನ ನನಗೆ ತೃಪ್ತಿ ನೀಡಿಲ್ಲ..

ನವದೆಹಲಿ : ಮೊದಲ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಯುವ ಶಟ್ಲರ್​ ಲಕ್ಷ್ಯಸೇನ್, ತಮಗೆ ಕಂಚಿನ ಪದಕ ಗೆದ್ದಿರುವುದು ತೃಪ್ತಿ ತಂದಿಲ್ಲ. ಆದರೆ, ಮುಂದಿನ ಬಾರಿ ಖಂಡಿತ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

20 ವರ್ಷದ ಶಟ್ಲರ್​ ಶನಿವಾರ ನಡೆದ ಬಿಡಬ್ಲ್ಯೂಎಫ್​ ವಿಶ್ವ ಚಾಂಪಿಯನ್​ಶಿಪ್​ ಸೆಮಿಫೈನಲ್​ನಲ್ಲಿ ಭಾರತದವರೇ ಆದ ಕಿಡಂಬಿ ಶ್ರೀಕಾಂತ್ ವಿರುದ್ಧ 21-17, 14-21, 17-21ರ ರೋಚಕ ಕದನದಲ್ಲಿ ಸೋಲು ಕಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

"ಇದೊಂದು ತುಂಬಾ ದೊಡ್ಡ ಟೂರ್ನಮೆಂಟ್​ ಮತ್ತು ಈ ರೀತಿ ಹತ್ತಿರಕ್ಕೆ ಬಂದು ಸೋಲು ಕಂಡಾಗ ಅದನ್ನು ಸ್ವೀಕರಿಸುವುದು ತುಂಬಾ ಕಷ್ಟವಾಗುತ್ತದೆ. ನಾನೂ ಕನಿಷ್ಠ ಕಂಚನ್ನಾದರೂ ಗೆದ್ದಿದ್ದೇನೆ. ಆದರೆ, ಇದರಿಂದ ನಾನು ಸಂತೋಷವಾಗಿಲ್ಲ. ಸೆಮಿಫೈನಲ್​ನಲ್ಲಿ ನಾನು ನೀಡಿದ ಪ್ರದರ್ಶನ ನನಗೆ ತೃಪ್ತಿ ನೀಡಿಲ್ಲ" ಎಂದು ಲಕ್ಷ್ಯ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ನಾನು ಟೂರ್ನಿಯಲ್ಲಿ ಸಾಕಷ್ಟು ಒಳ್ಳೆಯ ಪಂದ್ಯಗಳನ್ನಾಡಿದ್ದೇನೆ, ತುಂಬಾ ಕಠಿಣವಾದ ಎದುರಾಳಿಗಳನ್ನು ಎದುರಿಸಿದ್ದೇನೆ, ಸೆಮಿಫೈನಲ್ ಪಂದ್ಯ ಕೂಡ ತುಂಬಾ ಗೆಲುವಿಗೆ ಹತ್ತಿರವಾದ ಪಂದ್ಯವಾಗಿತ್ತು. ಈ ಪದಕ ನನಗೆ ಮುಂದೆ ಹೋಗುವುದಕ್ಕೆ ಒಂದು ವಿಶ್ವಾಸ ನೀಡಿದೆ. ಮುಂದಿನ ಬಾರಿ ನಾನು ಚಿನ್ನದ ಪದಕಕ್ಕಾಗಿ ಹೋಗುವೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಕ್ಷ್ಯ ಸೇನ್​ ಈ ಪದಕದೊಂದಿಗೆ ತಮ್ಮ ಹಿರಿಯ ಮಾರ್ಗದರ್ಶಕರಾದ ಕನ್ನಡಿಗ ಪ್ರಕಾಶ್ ಪಡುಕೋಣೆ(1983), ಸಾಯಿ ಪ್ರಣೀತ್(2019)​ ಜೊತೆಗೆ ಚಾಂಪಿಯನ್​ಶಿಪ್​ನಲ್ಲಿ ಪದಕ ಗೆದ್ದ ಪ್ರತಿಷ್ಠಿತ ಪಟ್ಟಿಗೆ ಸೇರಿಕೊಂಡರು.

ಪ್ರಕಾಶ್​ ಸರ್​ ಅಂತೆ ಸಾಕಷ್ಟು ಟೂರ್ನಮೆಂಟ್ ಗೆಲ್ಲಬೇಕು : ಇದು ನನ್ನ ಮೊದಲ ವಿಶ್ವಚಾಂಪಿಯನ್​ಶಿಪ್, ನಾನು ಸೆಮಿಫೈನಲ್ ಪ್ರವೇಶಿಸಿದ್ದೇನೆ ಮತ್ತು ಪ್ರಕಾಶ್​ ಸರ್ ಇರುವ ಪಟ್ಟಿಯಲ್ಲಿ​ ಸೇರಿಕೊಂಡಿದ್ದೇನೆ. ಆದರೆ, ನಾನು ಅವರಂತೆಯೇ ಸಾಕಷ್ಟು ಇವೆಂಟ್​ ಮತ್ತು ಹೆಚ್ಚು ಪದಕಗಳನ್ನು ಗೆಲ್ಲವುದಕ್ಕೆ ಎದುರು ನೋಡುತ್ತಿದ್ದೇನೆ. ಅದರಲ್ಲೂ ಆಲ್ ಇಂಗ್ಲೆಂಡ್​ ಚಾಂಪಿಯನ್​ಶಿಪ್​ ಗೆಲ್ಲಬೇಕು ಎಂದು ಸೇನ್ ತಿಳಿಸಿದ್ದಾರೆ.

ಈ ಕಂಚಿನ ಪದಕ ನನ್ನಲ್ಲಿನ ಆತ್ಮಿವಿಶ್ವಾಸವನ್ನು ಹೆಚ್ಚಿಸಿದೆ. ಇದು ನನ್ನ ಭವಿಷ್ಯದ ಟೂರ್ನಮೆಂಟ್​ಗಳಿಗೆ ತಳಪಾಯವಾಗಿದೆ ಎಂದು 20 ವರ್ಷದ ಯುವ ಶಟ್ಲರ್ ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​: ರೋಚಕ ಪಂದ್ಯ ಗೆದ್ದು ಫೈನಲ್​ಗೆ ಶ್ರೀಕಾಂತ್ ಲಗ್ಗೆ, ಕಂಚಿಗೆ ಮುತ್ತಿಕ್ಕಿದ ಲಕ್ಷ್ಯಸೇನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.