'ಕೋಟಿಗೊಬ್ಬ-3' ಬಿಡುಗಡೆಗೆ ವಿಳಂಬ: ವಿಜಯಪುರದಲ್ಲಿ ಕಿಚ್ಚನ ಅಭಿಮಾನಿಗಳ ಗಲಾಟೆ

author img

By

Published : Oct 14, 2021, 2:37 PM IST

ವಿಜಯಪುರದಲ್ಲಿ ಕಿಚ್ಚ ಅಭಿಮಾನಿಗಳ ಗಲಾಟೆ

ಬಹುನಿರೀಕ್ಷಿತ 'ಕೋಟಿಗೊಬ್ಬ-3' ಸಿನಿಮಾ ಪ್ರದರ್ಶನ ಸ್ಥಗಿತವಾದ ಹಾಗೂ ಚಿತ್ರ ಬಿಡುಗಡೆಗೆ ವಿಳಂಬವಾದ ಕಾರಣ ಕಿಚ್ಚ ಸುದೀಪ್ ಅಭಿಮಾನಿಗಳು ವಿಜಯಪುರದ ಡ್ರೀಮ್ ಲ್ಯಾಂಡ್ ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ವಿಜಯಪುರ: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ-3' ರಾಜ್ಯಾದ್ಯಂತ ಇಂದು ಬಿಡುಗಡೆ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಬಿಡುಗಡೆಗೆ ಅಡ್ಡಿಯುಂಟಾಗಿದೆ. ಚಿತ್ರ ಬಿಡುಗಡೆ ವಿಳಂಬ ಹಿನ್ನೆಲೆ ವಿಜಯಪುರದಲ್ಲಿ ಕಿಚ್ಚನ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ.

ವಿಜಯಪುರದಲ್ಲಿ ಕಿಚ್ಚನ ಅಭಿಮಾನಿಗಳ ಗಲಾಟೆ

ಇದನ್ನೂ ಓದಿ: ಇಂದು 'ಕೋಟಿಗೊಬ್ಬ 3' ರಿಲೀಸ್ ಆಗೋದು ಅನುಮಾನ: ಕಿಚ್ಚನ ಅಭಿಮಾನಿಗಳಿಗೆ ನಿರಾಸೆ

ನಗರದ ಡ್ರೀಮ್ ಲ್ಯಾಂಡ್ ಚಿತ್ರಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಸಿನಿಮಾ ಪ್ರದರ್ಶನವಾಗಬೇಕಾಗಿತ್ತು.‌ ಸುದೀಪ್​ ಅಭಿನಯದ ಚಿತ್ರ ನೋಡಲಿಕ್ಕಾಗಿ ಅಭಿಮಾನಿಗಳು ಬ್ಲ್ಯಾಕ್​ನಲ್ಲೂ ಟಿಕೆಟ್​​ ಖರೀದಿಸಿದ್ದರು.ಆದರೆ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದ್ದು, ಬಿಡುಗಡೆ ವಿಳಂಬವಾಗುತ್ತಿದೆ ಎಂದು ಅಭಿಮಾನಿಗಳು ಚಿತ್ರಮಂದಿರ ಮೇಲೆ ಕಲ್ಲು ತೂರಾಟ ನಡೆಸಿ, ಗ್ಲಾಸ್ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಕೋಟಿಗೊಬ್ಬ 3' ಚಿತ್ರ ಪ್ರದರ್ಶಿಸುವಂತೆ ಕೊಳ್ಳೇಗಾಲ ಕಿಚ್ಚ ಸುದೀಪ್ ಅಭಿಮಾನಿಗಳ ಪ್ರತಿಭಟನೆ

ಇದು ವಿಜಯಪುರದ ಚಿತ್ರಣ ಮಾತ್ರವಲ್ಲ, ರಾಜ್ಯಾದ್ಯಂತ ಸುದೀಪ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಲವೆಡೆ ಚಿತ್ರ ಪ್ರದರ್ಶಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.