'ಭಗವಾನ್ ವಿಷ್ಣು' ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಸುಮೇದ್‌ ಮುದ್ಗಲ್ಕರ್‌

author img

By

Published : Oct 14, 2021, 7:38 AM IST

Sumedh Mudgalkar

'ಹಾಥಿ ಘೋಡಾ ಪಾಲ್ಕಿ ಜೈ ಕನ್ನಯ್ಯ ಲಾಲ್ ಕಿ' ಧಾರಾವಾಹಿ ಇದೇ ಅಕ್ಟೋಬರ್ 19 ರಿಂದ ಸ್ಟಾರ್ ಭಾರತ್​ನಲ್ಲಿ ಆರಂಭವಾಗಲಿದ್ದು, 'ಭಗವಾನ್ ವಿಷ್ಣು' ಅವತಾರದಲ್ಲಿ ನಟ ಸುಮೇದ್‌ ಮುದ್ಗಲ್ಕರ್‌ ಕಾಣಿಸಿಕೊಳ್ಳಲಿದ್ದಾರೆ.

'ರಾಧಾ ಕೃಷ್ಣ' ಸೀರಿಯಲ್​ನಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿರುವ ಸುಮೇದ್‌ ಮುದ್ಗಲ್ಕರ್‌, ತುಂಬ ಕಡಿಮೆ ಸಮಯದಲ್ಲಿ ಜನರ ಮನಸ್ಸು ಗೆದ್ದಿದ್ದರು. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್​ ಕೊಟ್ಟಿರುವ ಈ ನಟ, ನಮ್ಮ ಮುಂದಿನ ಧಾರಾವಾಹಿ ಕುರಿತು ತಿಳಿಸಿದ್ದಾರೆ.

ಸುಮೇದ್ ಮುದ್ಗಲ್ಕರ್ ಅವರು ಮುಂಬರುವ 'ಹಾಥಿ ಘೋಡಾ ಪಾಲ್ಕಿ ಜೈ ಕನ್ನಯ್ಯ ಲಾಲ್ ಕಿ' ಧಾರಾವಾಹಿಯಲ್ಲಿ ಬಣ್ಣಹಚ್ಚಿದ್ದು, 'ಭಗವಾನ್ ವಿಷ್ಣು' ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರವಾಹಿಯ 'ತುಂಟ ಬಾಲ ಕೃಷ್ಣ'ನ ಕತೆಯನ್ನು ಒಳಗೊಂಡಿದ್ದು, ಪ್ರೇಕ್ಷಕರಿಗೆ ಅದ್ಭುತ ಪೌರಾಣಿಕದ ಅನುಭವದ ನೀಡುವುದರಲ್ಲಿ ಅನುಮಾನವಿಲ್ಲ.

ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಸುಮೇದ್‌ ಮುದ್ಗಲ್ಕರ್‌, ''ಸೀರಿಯಲ್ ಸೆಟ್​ನಲ್ಲಿ ಮಕ್ಕಳೊಂದಿಗೆ ಕೆಲಸ ಮಾಡುವುದು ನನಗೆ ವಿಶೇಷ ಅನುಭವ ನೀಡುತ್ತದೆ. ಮಕ್ಕಳು ಮುಗ್ಧರು, ಅವರಿಂದಲೂ ಸಹ ಕಲಿಯುವುದು ತುಂಬಾ ಇದೆ. ಅವರು ಮಾಡುವ ಪ್ರತಿಯೊಂದು ಕೆಲಸವೂ ನಮಗೆ ಉತ್ತಮ ಉದಾಹರಣೆ. ಈ ಅವಕಾಶ ನೀಡಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದೆಲ್ಲವೂ ಆಶೀರ್ವಾದದಂತೆ ಭಾಸವಾಗುತ್ತದೆ " ಎಂದಿದ್ದಾರೆ.

'ಹಾಥಿ ಘೋಡಾ ಪಾಲ್ಕಿ ಜೈ ಕನ್ನಯ್ಯ ಲಾಲ್ ಕಿ' ಧಾರಾವಾಹಿ ಇದೇ ಅಕ್ಟೋಬರ್ 19 ರಿಂದ ಸ್ಟಾರ್ ಭಾರತ್​ನಲ್ಲಿ ಆರಂಭವಾಗಲಿದೆ.

'ದಿಲ್ ದೋಸ್ತಿ ನೃತ್ಯ', 'ಡಾನ್ಸ್ ಇಂಡಿಯಾ ಡಾನ್ಸ್ 4' ರಿಯಾಲಿಟಿ ಶೋ, 'ಚಕ್ರವರ್ತಿ ಅಶೋಕ ಸಾಮ್ರಾಟ', 'ರಾಧಾ ಕೃಷ್ಣ' ಧಾರಾವಾಹಿ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಸುಮೇದ್‌ ಹೆಸರುವಾಸಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.