ಸಾವಿನಲ್ಲೂ ಒಂದಾದ ಗಂಡ ಹೆಂಡತಿ, ಪತ್ನಿ ಸಾವಿನಿಂದ ಮನನೊಂದು ನೇಣಿಗೆ ಶರಣಾದ ಪತಿ

author img

By

Published : Jan 27, 2022, 2:00 PM IST

sucide

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಸಿದ್ದಗಂಗಾ ಶಾಲೆಯ ಸಮೀಪ ಘಟನೆ ನಡೆದಿದ್ದು, ಹೆಂಡತಿ ಲಾವಣ್ಯ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ, ಹೆಂಡತಿ ಸಾವಿನಿಂದ ಮನನೊಂದ ಗಂಡ ವಿಜಯೇಂದ್ರ (38) ನೇಣಿಗೆ ಶರಣಾಗಿದ್ದಾನೆ.

ದೇವನಹಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಹೆಂಡತಿ ಸಾವನ್ನಪ್ಪಿದ್ದು, ಹೆಂಡತಿ ಸಾವಿನಿಂದ ಮನನೊಂದ ಗಂಡ ಹೆಂಡತಿ ಸಾವಿನ ಸುದ್ದಿಯನ್ನ ಯಾರಿಗೂ ಹೇಳದೇ ನೇಣಿಗೆ ಶರಣಾಗುವ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ.

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಸಿದ್ದಗಂಗಾ ಶಾಲೆಯ ಸಮೀಪ ಘಟನೆ ನಡೆದಿದ್ದು, ಹೆಂಡತಿ ಲಾವಣ್ಯ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ, ಹೆಂಡತಿ ಸಾವಿನಿಂದ ಮನನೊಂದ ಗಂಡ ವಿಜಯೇಂದ್ರ (38) ನೇಣಿಗೆ ಶರಣಾಗಿದ್ದಾನೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
9 ವರ್ಷಗಳ ಹಿಂದೆ ಮದುವೆಯಾಗಿದ್ದ ಇಬ್ಬರು ಬೂದಿಗ್ರಾಮದಲ್ಲಿ ವಾಸವಾಗಿದ್ದರು, ದಂಪತಿಗೆ ಮಕ್ಕಳು ಇರಲಿಲ್ಲ, ಅನಾರೋಗ್ಯದಿಂದ ಬಳಲುತ್ತಿದ್ದ ಲಾವಣ್ಯ ಇಂದು ಬೆಳಗ್ಗೆ ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ಹೆಂಡತಿ ಸಾವಿನಿಂದ ಮನನೊಂದ ಗಂಡ ಹೆಂಡತಿ ಸಾವಿನ ಬಗ್ಗೆ ಯಾರಿಗೂ ಹೇಳದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನು ಓದಿ:ದಾವಣಗೆರೆಯಲ್ಲಿ ಬೈಕ್​-ಲಾರಿ ನಡುವೆ ಭೀಕರ ಅಪಘಾತ....ಸ್ಥಳದಲ್ಲೇ ಇಬ್ಬರ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.