ತುಮಕೂರು : ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಮಾರುತಿ ವ್ಯಾನ್ ಸಮೇತ ಪತ್ತೆ

author img

By

Published : Aug 6, 2022, 4:17 PM IST

dead-body-found-in-tumakuru

ಆಗಸ್ಟ್ ನಾಲ್ಕರಂದು ಸೇತುವೆ ಮೇಲೆ ಮಾರುತಿ ವ್ಯಾನ್​ ನೀರಿನಲ್ಲಿ ಕೊಚ್ಚಿಹೋಗಿತ್ತು. ಅದರಲ್ಲಿ ಇಬ್ಬರಿದ್ದು ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ಮತ್ತೊಬ್ಬರು ವ್ಯಾನ್​ ಸಮೇತ ಕೊಚ್ಚಿ ಹೋಗಿದ್ದರು.

ತುಮಕೂರು : ಜಿಲ್ಲೆಯ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ಮಾರುತಿ ವ್ಯಾನ್ ಸಮೇತ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಇಂದು ಪತ್ತೆಯಾಗಿದೆ. ಆಗಸ್ಟ್ ನಾಲ್ಕರಂದು ಸೇತುವೆ ಮೇಲೆ ಮಾರುತಿ ವ್ಯಾನ್​ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅದರಲ್ಲಿ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು.

ಮತ್ತೊಬ್ಬ ಗಡಬನಹಳ್ಳಿ ಗ್ರಾಮದ ಪಟೇಲ್ ಕುಮಾರಸ್ವಾಮಿ ವಾಹನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇವರನ್ನು ಹುಡುಕಲು ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದರು. ಇಂದು ಮಾರುತಿ ವ್ಯಾನ್ ಸಮೇತ ಅವರ ಶವ ಪತ್ತೆಯಾಗಿದೆ.

ಇದನ್ನೂ ಓದಿ : ನೀರಿನಲ್ಲಿ ಕೊಚ್ಚಿಹೋದ ಬಾಲಕ, ಯುವಕ: ಪ್ರಾಣಾಪಾಯದಿಂದ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.