ಶಿವಮೊಗ್ಗದಲ್ಲಿ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಕೊಲೆ

author img

By

Published : Sep 25, 2021, 8:47 AM IST

shivamogga murder case

ಶಿವಮೊಗ್ಗ ಹೊರ ವಲಯದಲ್ಲಿ ವ್ಯಕ್ತಿಯೋರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಶಿವಮೊಗ್ಗ: ನಗರದ ಹೊರ ವಲಯದಲ್ಲಿರುವ ಕಲ್ಲೂರು- ಮಂಡ್ಲಿಯ ಕೈಗಾರಿಕಾ ವಸಾಹತು ಪ್ರದೇಶದ ಎದುರಿನ ಖಾಲಿ ಲೇಔಟ್​ನಲ್ಲಿ ಸೈಯದ್ ಸಾಧಿಕ್ (32) ಎಂಬಾತನ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

saiyad sadhik murder case
ಸೈಯದ್ ಸಾಧಿಕ್ ಕೊಲೆ ಪ್ರಕರಣ

ಸೈಯದ್ ಸಾಧಿಕ್​ರನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರಬಹುದು. ರಿಯಲ್ ಎಸ್ಟೇಟ್ ಹಣ ಹಂಚಿಕೆಯ ಕುರಿತು ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚೆಂಡು ಹೂವು ಬೆಳೆದು ಲಾಭ ಪಡೆಯುತ್ತಿರುವ ಬಾದಾಮಿ ರೈತರು

ಇನ್ನೂ ಕೊಲೆಗೈದವ್ರು ಪರಾರಿಯಾಗಿದ್ದಾರೆ. ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.