ಕೇಂದ್ರ ಸಚಿವ ಜೋಶಿ ಕುಟುಂಬದ ಮದುವೆಯಲ್ಲಿ ಉಪರಾಷ್ಟ್ರಪತಿ: ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ತೆರಳಿದ ನಾಯ್ಡು

author img

By

Published : Aug 22, 2021, 12:26 PM IST

ಕೇಂದ್ರ ಸಚಿವ ಜೋಶಿ ಕುಟುಂಬದ ಮದುವೆಯಲ್ಲಿ ಉಪರಾಷ್ಟ್ರಪತಿ

ಮೂರು ದಿನಗಳ ರಾಜ್ಯ ಪ್ರವಾಸ ಮುಗಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಅವರ ಪತ್ನಿ ಎಂ.ಉಷಾ ಅವರು ಇಂದು ದೆಹಲಿಗೆ ತೆರಳಿದರು.


ಹುಬ್ಬಳ್ಳಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಅವರ ಪತ್ನಿ ಎಂ.ಉಷಾ ಅವರು ಮೂರು ದಿನಗಳ ಕರ್ನಾಟಕ ಪ್ರವಾಸ ಪೂರ್ಣಗೊಳಿಸಿ ಇಂದು ದೆಹಲಿಗೆ ತೆರಳಿದರು. ಹುಬ್ಬಳ್ಳಿಯಿಂದ ವಾಯುಸೇನೆಯ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.

ವಿಜಯನಗರ ಜಿಲ್ಲೆ ಹೊಸಪೇಟೆಯ ತುಂಗಭದ್ರಾ ಜಲಾಶಯ ಮತ್ತು ಐತಿಹಾಸಿಕ ಹಂಪಿ ಪ್ರವಾಸ ಮುಗಿಸಿ ಇಂದು ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿದ್ದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಅವರ ಪತ್ನಿ ಎಂ.ಉಷಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾದ ಲಾಬೂರಾಮ್ ಅವರು ಬರಮಾಡಿಕೊಂಡರು.

ಉಪರಾಷ್ಟ್ರಪತಿ ಸ್ವಾಗತಿಸಿದ ಸಿಎಂ
ಉಪರಾಷ್ಟ್ರಪತಿ ಸ್ವಾಗತಿಸಿದ ಸಿಎಂ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಣ್ಣನ‌ಮಗನ ಮದುವೆ ಕಾರ್ಯ: ವಧುವರರಿಗೆ ಆಶೀರ್ವದಿಸಿದ ಉಪ ರಾಷ್ಟ್ರಪತಿ ನಂತರ ಗೋಕುಲ ರಸ್ತೆಯ ಖಾಸಗಿ ಹೊಟೇಲ್‌ವೊಂದರಲ್ಲಿ ಏರ್ಪಡಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರನ ಮಗನ ಮದುವೆ ಸಮಾರಂಭದಲ್ಲಿ ಉಪರಾಷ್ಟ್ರಪತಿ ಭಾಗವಹಿಸಿ, ವಧು-ವರರಿಗೆ ಆಶೀರ್ವದಿಸಿದರು.
ಕೇಂದ್ರ ಸಚಿವ ಜೋಶಿ ಕುಟುಂಬದ ಮದುವೆಯಲ್ಲಿ ಉಪರಾಷ್ಟ್ರಪತಿ
ಕೇಂದ್ರ ಸಚಿವ ಜೋಶಿ ಕುಟುಂಬದ ಮದುವೆಯಲ್ಲಿ ಉಪರಾಷ್ಟ್ರಪತಿ

ಕೇಂದ್ರ ಸಚಿವ ಜೋಶಿ ಅವರ ಅಣ್ಣ ಗೋವಿಂದ‌ ಜೋಶಿಯವರ ಮಗ ಅಭಯ ಜೋಶಿ ಮದುವೆ ಸಮಾರಂಭದ ಬಳಿಕ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಾಯುಸೇನಾ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸಿದರು.

(ವಿಜಯನಗರ ಭೇಟಿ ಯಶಸ್ವಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಬೀಳ್ಕೊಟ್ಟ ಡಿಸಿ)

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.