ಪದೇ ಪದೇ ಪೆಟ್ರೋಲ್ ಬಗ್ಗೆ ಕೇಳಿ ನನ್ನನ್ನು ಟ್ರೋಲ್ ಮಾಡಬೇಡಿ ಮಾರಾಯ: ಸಂಸದ ಜಿ.ಎಂ.ಸಿದ್ದೇಶ್ವರ್

author img

By

Published : Sep 17, 2021, 8:21 PM IST

MP GM Siddeshwar

'ಜಿಎಸ್​​ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ವಿಚಾರ ಗೊತ್ತಿಲ್ಲ. ಎಲ್ಲಾ ರಾಜ್ಯಗಳು ಒಪ್ಪಿದರೆ ಈ ಕೆಲಸ ಆಗಬಹುದು'- ಸಂಸದ ಜಿ.ಎಂ.ಸಿದ್ದೇಶ್ವರ್

ದಾವಣಗೆರೆ: ಸಂಸದ ಜಿ.ಎಂ.ಸಿದ್ದೇಶ್ವರ್ ಪೆಟ್ರೋಲ್ ಬಗ್ಗೆ ಮಾತನಾಡಿ ಸಾಕಷ್ಟು ನಗೆಪಾಟಲಿಗೀಡಾಗಿದ್ದಾರೆ. ಇದೀಗ ಪದೇ ಪದೇ ಪೆಟ್ರೋಲ್ ಬಗ್ಗೆ ಕೇಳಿ ನನ್ನನ್ನು ಟ್ರೋಲ್ ಮಾಡಬೇಡಿ ಮಾರಾಯ ಎಂದು ನಗುತ್ತಲೇ ಮನವಿ ಮಾಡಿದ್ದಾರೆ.

ಸಂಸದ ಜಿ.ಎಂ.ಸಿದ್ದೇಶ್ವರ್

ದಾವಣಗೆರೆಯಲ್ಲಿ ಮಾತನಾಡಿದ ಅವರು, ಹಣಕಾಸು ಸಚಿವರ ಜಿಎಸ್​​ಟಿ ಸಭೆ ನಡೆದಿರುವುದು ನನಗೆ ಗೊತ್ತೇ ಇಲ್ಲ. ಅದರಲ್ಲಿಯೂ ಜಿಎಸ್​​ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ವಿಚಾರ ಕೂಡ ಗೊತ್ತಿಲ್ಲ. ಎಲ್ಲಾ ರಾಜ್ಯಗಳು ಒಪ್ಪಿದರೆ ಈ ಕೆಲಸ ಆಗಬಹುದು, ಆದರೆ ಕೋವಿಡ್ ಹಿನ್ನೆಲೆ ಈ ಕೆಲಸ ಅಸಾಧ್ಯ ಎಂದರು.

ಪೆಟ್ರೋಲ್ ವಿಚಾರ ಬಿಟ್ಟು ನಮ್ಮ ಸಾಧನೆಗಳ ಬಗ್ಗೆ ಪ್ರಶ್ನೆ ಕೇಳಿ ಎಂದು ಪತ್ರಕರ್ತರ ಮೇಲೆ ಗರಂ ಆದ ಸಿದ್ದೇಶ್ವರ್, ಶಾಸಕ ಉತ್ನಾಳ್ ಬಗ್ಗೆ ಮಾತನಾಡಿ, ಯತ್ನಾಳ್ ಬುದ್ದಿವಂತ. ಒಳ್ಳೆ ಸುದ್ದಿಯನ್ನು ಆ ದೇವರು ಕೊಡಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.