ಮಣ್ಣಿನಿಂದ ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಸಿಬ್ಬಂದಿ ನಡೆಗೆ ಜನ ಮೆಚ್ಚುಗೆ

author img

By

Published : Nov 25, 2021, 1:30 PM IST

constable covered with potholes in the road in Davanagere

constable: ದಾವಣಗೆರೆಯ ಸಂಚಾರಿ ಠಾಣೆಯ ಕಾನ್ಸ್​ಟೇಬಲ್ ಹೇಮಣ್ಣ ಅವರು ರಸ್ತೆಯಲ್ಲಿನ ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದಾವಣಗೆರೆ: ಪೊಲೀಸರು ರಕ್ಷಕರಲ್ಲ ಭಕ್ಷಕರು ಎಂದು ಹೇಳುವುದು ಸಾಮಾನ್ಯ. ಆದರೆ, ಅದೇ ಇಲಾಖೆಯ ಕೆಲ ಪೊಲೀಸರು ಜನಸಾಮಾನ್ಯರು ಸಂಚರಿಸುವಾಗ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಸ್ತೆ ಗುಂಡಿಗೆ ಮಣ್ಣು ಹಾಕಿ ಗುಂಡಿ ಮುಚ್ಚುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

constable covered potholes: ದಾವಣಗೆರೆಯ ಸಂಚಾರಿ ಠಾಣೆ ಕಾನ್ಸ್​​ಟೇಬಲ್ ಹೇಮಣ್ಣ ಅವರು ರಸ್ತೆಯಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ. ನಗರದ ಸರ್ಕಲ್‌ನಲ್ಲಿ ಬಾಯಿಬಿಟ್ಟಿದ್ದ ದೊಡ್ಡ ಗುಂಡಿಗಳನ್ನು ಹೇಮಣ್ಣ ಮುಚ್ಚುತ್ತಿದ್ದಾರೆ.

ಮಳೆಯಿಂದ ಗುಂಡಿಗಳು ಬಿದ್ದಿದ್ದು, ಈ ಗುಂಡಿಗಳಿಂದ ಜನಸಾಮಾನ್ಯರಿಗೆ ತೊದರೆಯಾಗುತ್ತಿತ್ತು. ಇದಲ್ಲದೇ ವಾಹನ ಸವಾರರಿಗೆ ಕೂಡ ಗುಂಡಿಗಳಿಂದ ಅಪಘಾತವಾಗುವ ಸಂಭವ ಹೆಚ್ಚಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಕಾನ್ಸ್​​ಟೇಬಲ್ ಹೇಮಣ್ಣನವರು ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಗುಂಡಿಗಳುನ್ನು ಬರಿಗೈಯಿಂದಲೇ ಜಲ್ಲಿ ತುಂಬಿಕೊಂಡು ಬಂದು ಮುಚ್ಚುತ್ತಿರುವ ದೃಶ್ಯಗಳನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ACB Raid: ದಾವಣಗೆರೆ, ದೊಡ್ಡಬಳ್ಳಾಪುರದಲ್ಲೂ ಅಧಿಕಾರಿಗಳಿಗೆ ಎಸಿಬಿ ಶಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.