ಪ್ರಯಾಣಿಕರ ಗಮನಕ್ಕೆ.. ಭಾರಿ ಮಳೆಯಿಂದ ಯಶವಂತಪುರ - ಮುಜಫರ್​​​ಪುರ  ಎಕ್ಸ್​​ಪ್ರೆಸ್ ರೈಲು ಸೇವೆ ರದ್ಧು

author img

By

Published : Nov 25, 2021, 6:56 AM IST

Yashwantpur-Muzaffarpur express train canceled

ರಾಜಧಾನಿ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುತ್ತಿರುವ ಕಾರಣದಿಂದ ಇಂದು ರೈಲು ಸಂಖ್ಯೆ 15227 ಯಶವಂತಪುರ - ಮುಜಫರ್​​​ಪುರ ಎಕ್ಸ್​​ಪ್ರೆಸ್ ಸೇವೆಯನ್ನು ರದ್ದುಗೊಳಿಸಲಾಗಿದೆ.

ಬೆಂಗಳೂರು: ರಾಜಧಾನಿ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುತ್ತಿರುವ ಕಾರಣ ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಲ್ಲಿ ರೈಲು ಮಾರ್ಗದ ತಾತ್ಕಾಲಿಕ ತಡೆಯ ನಿಮಿತ್ತ ಇಂದು ರೈಲು ಸಂಖ್ಯೆ 15227 ಯಶವಂತಪುರ- ಮುಜಫರ್​​​ಪುರ ಎಕ್ಸ್​​ಪ್ರೆಸ್ ಸೇವೆಯನ್ನು ರದ್ದುಗೊಳಿಸಲಾಗಿದೆ.

ನ.26 ರಂದು ಬೆಂಗಳೂರು ವಿಭಾಗದ ಹೊಸೂರು ಭಾಗದಲ್ಲಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವ ನಿಮಿತ್ತ ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.

  1. ರೈಲು ಸಂಖ್ಯೆ 06262 ಹೊಸೂರು- ಕೆಎಸ್ಆರ್ ಬೆಂಗಳೂರು ಮೆಮು ರೈಲನ್ನು ಬೈಯ್ಯಪ್ಪನಹಳ್ಳಿಯಲ್ಲಿ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
  2. ರೈಲು ಸಂಖ್ಯೆ 07315 ಯಶವಂತಪುರ-ಸೇಲಂ ಕಾಯ್ದಿರಿಸದ ವಿಶೇಷ ಪ್ಯಾಸೆಂಜರ್ ರೈಲನ್ನು ಲೊಟ್ಟೆಗೊಲ್ಲಹಳ್ಳಿಯಲ್ಲಿ 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ಇದನ್ನೂ ಓದಿ: ಆಸ್ತಿ ಅಧಿಕೃತವಿರಲಿ, ಅನಧಿಕೃತವಿರಲಿ ಗುರುತಿನ ಸಂಖ್ಯೆ ನೀಡಿ : ಬಿಬಿಎಂಪಿಗೆ ಹೈಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.