ಪೆಟ್ರೋಲ್​ -ಡೀಸೆಲ್​​​​​​ ದರ ಮೀರಿಸಿದ ತರಕಾರಿ ಬೆಲೆ... Vegetable ಬೆಲೆ ಕಂಡು ಬೆಂಗಳೂರಿಗರು ದಂಗು

author img

By

Published : Nov 24, 2021, 9:58 AM IST

Vegetable rate hike in Bangalore

ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಸೊಪ್ಪು, ತರಕಾರಿ ಉತ್ಪನ್ನ ರೈತರ ಜಮೀನಿನಲ್ಲೇ ಹಾಳಾಗಿವೆ. ಅಲ್ಲದೇ, ನಿರಂತರ ಮಳೆಯಿಂದ ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆ ಆಗದ ಹಿನ್ನೆಲೆ ತರಕಾರಿಗಳ ಸಗಟು ಮತ್ತು ಚಿಲ್ಲರೆ ಬೆಲೆ ದುಪ್ಪಟ್ಟಾಗಿದೆ.

ಬೆಂಗಳೂರು: ಅಕಾಲಿಕವಾಗಿ ಸುರಿದ ಭಾರಿ ಮಳೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ವರುಣಾರ್ಭಟಕ್ಕೆ ಬೆಳೆ ಹಾನಿಯಾಗಿದ್ದು, ತರಕಾರಿ ಬೆಲೆ ಗಗನಕ್ಕೇರಿದೆ. ನಿರಂತರ ಮಳೆಯಿಂದ ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆ ಆಗದ ಹಿನ್ನೆಲೆಯಲ್ಲಿ ಟೊಮೇಟೊ, ಕ್ಯಾಪ್ಸಿಕಂ ಸೇರಿದಂತೆ ಎಲ್ಲ ತರಕಾರಿಗಳ ಸಗಟು ಮತ್ತು ಚಿಲ್ಲರೆ ಬೆಲೆ ದುಪ್ಪಟ್ಟಾಗಿದೆ.

ಬೆಂಗಳೂರಿನಲ್ಲಿ ಹೀಗಿದೆ ತರಕಾರಿ ಬೆಲೆ:

ಬೆಳ್ಳುಳ್ಳಿ132 ರೂ.
ಟೊಮೇಟೊ103 ರೂ.
ದಪ್ಪ ಮೆಣಸಿನಕಾಯಿ130 ರೂ.
ಹಸಿ ಮೆಣಸಿನಕಾಯಿ60 ರೂ.
ಗಜ್ಜರಿ80 ರೂ.
ನಾಟಿ ಗಜ್ಜರಿ94 ರೂ.
ಹುರಳಿಕಾಯಿ (ಬೀನ್ಸ್)103 ರೂ.
ಬದನೆಕಾಯಿ 99 ರೂ.
ಸೌತೆಕಾಯಿ 24 ರೂ.
ನುಗ್ಗೆ ಕಾಯಿ322 ರೂ.
ಶುಂಠಿ 80 ರೂ.
ಈರುಳ್ಳಿ(ಮಧ್ಯಮ)53 ರೂ.
ಸಾಂಬರ್ ಈರುಳ್ಳಿ56 ರೂ.
ಆಲೂಗಡ್ಡೆ44 ರೂ.
ಮೂಲಂಗಿ 67 ರೂ.
ಕೊತ್ತಂಬರಿ ಸೊಪ್ಪು86 ರೂ.
ಮೆಂತ್ಯ ಸೊಪ್ಪು128 ರೂ.
ಪಾಲಕ್ ಸೊಪ್ಪು 107 ರೂ.
ಸಬ್ಬಕ್ಕಿ ಸೊಪ್ಪು 70 ರೂ.
ಕರಿಬೇವು67 ರೂ.
ದಂಟಿನ ಸೊಪ್ಪು110 ರೂ.
ತೆಂಗಿನ ಕಾಯಿ 32 ರೂ.

ಓದಿ: Big Ghol Fish: ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.