ಅಪ್ಪುಗೆ 'ಕರ್ನಾಟಕ ರತ್ನ' ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಂಗೆ: ಸಂಸದೆ ಸುಮಲತಾ ಅಂಬರೀಶ್​

author img

By

Published : Nov 24, 2021, 3:51 PM IST

mp sumalatha ambarish reaction on karnataka ratna for ambarish

ಅಪ್ಪುಗೆ 'ಕರ್ನಾಟಕ ರತ್ನ' ಪ್ರಶಸ್ತಿ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂಗೆ. ಈ ವಿಚಾರದಲ್ಲಿ ಅಭಿಮಾನಿಗಳು ಕೂಡ ಇದೇ ರೀತಿಯ ಭಾವನೆ ಅಳವಡಿಸಿಕೊಳ್ಳಬೇಕೆಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಮನವಿ ಮಾಡಿದರು.

ಬೆಂಗಳೂರು: ಅಪ್ಪುಗೆ 'ಕರ್ನಾಟಕ ರತ್ನ' ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂಗೆ ಅನ್ನೋದು ನನ್ನ ಅಭಿಪ್ರಾಯ. ಅದರಲ್ಲಿ ಯಾವುದೇ ಭೇದಭಾವ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.


ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಖ್ಯಾತಿಯ ಅಂಬರೀಶ್​ ನಿಧನರಾಗಿ ಇಂದಿಗೆ 3 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್​ ಸಮಾಧಿಗೆ ತೆರಳಿ ಸುಮಲತಾ ಅಂಬರೀಶ್​, ಮಗ ಅಭಿಷೇಕ್ ಸೇರಿ ಚಿತ್ರರಂಗದ ಹಲವು ಗಣ್ಯರು ಪೂಜೆ ಸಲ್ಲಿಸಿದರು.

ಈ ವೇಳೆ ಅಂಬರೀಶ್​​ಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವ​ ವಿಚಾರವಾಗಿ ಮಾತನಾಡಿದ ಸಂಸದೆ​, ಪುನೀತ್​ಗೆ ಸಿಕ್ಕ ಗೌರವ ಅಂಬರೀಶ್​ ಅವ್ರಿಗೂ ಸಿಗುತ್ತೆ, ನನಗೆ ನಂಬಿಕೆ ಇದೆ ಎಂದು ಹೇಳಿದರು. ಅಪ್ಪುಗೆ 'ಕರ್ನಾಟಕ ರತ್ನ' ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಂತೆಯೇ. ಅಂಬರೀಶ್​ ಅವರಿಗೆ ಏನು ಗೌರವ ಸಿಗಬೇಕಿತ್ತೋ ಅದು ಸಿಕ್ಕೇ ಸಿಕ್ಕುತ್ತೆ ಎಂಬ ಭರವಸೆ ಇದೆ. ಅದು ಆಗಲೇ ಸಿಕ್ಕಿದೆ. ಅದು ಜನರ ಪ್ರೀತಿ, ಅದೇ ದೊಡ್ಡ ಪ್ರಶಸ್ತಿ. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂಗೆ ಅನ್ನೋದು ನನ್ನ ಅಭಿಪ್ರಾಯ. ಅದರಲ್ಲಿ ಯಾವುದೇ ಭೇದಭಾವ ಇಲ್ಲ. ಒಂದು ವೇಳೆ ಅಂಬರೀಶ್​ ಈಗ ಇದ್ದಿದ್ರೆ ಅವ್ರಿಗೆ ಸಿಗೋದ್ಕಿಂತ 'ಅಪ್ಪು'ಗೆ ಪ್ರಶಸ್ತಿ ಕೊಟ್ಟಿರೋದಕ್ಕೆ ಅವರು ಹೆಮ್ಮೆ ಪಡ್ತಿದ್ರು, ಸಂತೋಷ ಪಡ್ತಿದ್ರು ಎಂದು ಸುಮಲತಾ ಅಂಬರೀಶ್​ ಹೇಳಿದರು. ಅಭಿಮಾನಿಗಳು ಕೂಡ ಇದೇ ರೀತಿಯ ಭಾವನೆಗಳನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು.


ಇದನ್ನೂ ಓದಿ: ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ: ದರ್ಶನ್ ಟ್ವೀಟ್​

ಸದ್ಯದಲ್ಲೇ ಅಂಬರೀಶ್​ ಸ್ಮಾರಕ ನಿರ್ಮಾಣ:

ಅಂಬರೀಶ್​ ಸ್ಮಾರಕ ನಿರ್ಮಾಣದ ವಿಚಾರವಾಗಿ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅಂಬರೀಶ್​ ಸ್ಮಾರಕ ನಿರ್ಮಾಣಕ್ಕೆ 4 ಕೋಟಿ 75 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸ್ಮಾರಕದ ಕೆಲಸಗಳು ಸದ್ಯದಲ್ಲೇ ಶುರುವಾಗಲಿದೆ. ಆದಷ್ಟು ಬೇಗ ಅಂಬರೀಶ್​ ಸ್ಮಾರಕದ ಕೆಲಸಗಳನ್ನು ಪೂರ್ಣಗೊಳಿಸಿ ಬಹುಬೇಗನೆ ನಮ್ಮ ಸರ್ಕಾರದ ಮುಖ್ಯಮಂತ್ರಿಗಳು ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.