ದೊಡ್ಡಬಳ್ಳಾಪುರ: ಎಂಎಸ್​​​ಜಿಪಿ ಘಟಕ ಮುಚ್ಚುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ

author img

By

Published : Nov 24, 2021, 2:29 PM IST

Doddaballapura

ಬಿಬಿಎಂಪಿ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಎಂಎಸ್​​ಜಿಪಿ ಘಟಕವನ್ನ ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.

ದೊಡ್ಡಬಳ್ಳಾಪುರ: ಬೆಂಗಳೂರು ಮಹಾನಗರದ ಕಸ ಬೆಂಗಳೂರು ಗ್ರಾಮೀಣ ಜನರಿಗೆ ವಿಷವಾಗಿದೆ. ಬಿಬಿಎಂಪಿ ತ್ಯಾಜ್ಯವನ್ನ ತಂದು ಭಕ್ತರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿಯಲಾಗುತ್ತಿದೆ. ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡದೇ ಇರುವುದರಿಂದ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿದೆ. ಹಾಗಾಗಿ ಬಿಬಿಎಂಪಿ ತ್ಯಾಜ್ಯ ಸಂಸ್ಕರಣೆ ಮಾಡುವ ಎಂಎಸ್​​ಜಿಪಿ ಘಟಕವನ್ನ ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಎಂಎಸ್​​​ಜಿಪಿ ಘಟಕ ಮುಚ್ಚುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ..

ಧರಣಿಗೆ ಪೂರ್ವಭಾವಿಯಾಗಿ ಸೋಮವಾರ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರು ಹಾಗು ನವ ಬೆಂಗಳೂರು ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ವಿ ಸತ್ಯ ಪ್ರಕಾಶ್ (ಸಾರಥಿ), ಸಂಸ್ಥಾಪಕ ಅಧ್ಯಕ್ಷ ಜಿ. ಏನ್ ಪ್ರದೀಪ್ ಮತ್ತು ಭಕ್ತರ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ ಗ್ರಾಮಸ್ಥರೊಂದಿಗೆ ಭಕ್ತರಹಳ್ಳಿ ವ್ಯಾಪ್ತಿಯ ಎಂಎಸ್​​ಜಿಪಿ ಘಟಕಕ್ಕೆ ಭೇಟಿ ನೀಡಿ ಘಟಕ ಮುಚ್ಚುವಂತೆ ಆಗ್ರಹಿಸಿದರು.

ಈ ಕಸ ವಿಲೇವಾರಿ ಘಟಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಷಪೂರಿತ ಗಾಳಿಯನ್ನು ಹರಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ ಸತ್ಯಪ್ರಕಾಶ್, ಈ ಕಸ ವಿಲೇವಾರಿ ಘಟಕ ಸುತ್ತಮುತ್ತಲಿನ ಗ್ರಾಮಗಳಿಗೆ ಮಾರಕವಾಗಿದೆ. ಈ ಕುರಿತಾಗಿ ಹಲವು ಬಾರಿ ನಾವು ಮನವಿ ಸಲ್ಲಿಸಿ, ರಾಜಕೀಯ ನಾಯಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಕೂಡಲೇ ಕಸ ವಿಲೇವಾರಿ ಘಟಕ ಮುಚ್ಚಬೇಕು. ಕಾರಣ ಈ ಕಸ ವಿಲೇವಾರಿ ಘಟಕದಲ್ಲಿ ಬಯೋಕೆಮಿಕಲ್ ಸೇರಿದಂತೆ ಹಲವು ವಿಷಪೂರಿತ ತ್ಯಾಜ್ಯಗಳನ್ನು ಸಹ ವಿಲೇವಾರಿ ಮಾಡಲಾಗುತ್ತಿದೆ. ಈ ತ್ಯಾಜ್ಯಗಳಿಂದ ಬರುವ ವಿಷಪೂರಿತ ನೀರನ್ನು ಗ್ರಾಮಗಳ ಜಲಮೂಲಗಳಿಗೆ ಹರಿ ಬಿಡುತ್ತಿದ್ದು, ಗ್ರಾಮಗಳಲ್ಲಿ ನೀರು ವಿಷಪೂರಿತವಾಗಿದೆ.

ಈ ಕಾರಣದಿಂದಾಗಿ ಸುತ್ತಮುತ್ತಲ ಗ್ರಾಮದವರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಕಸ ವಿಲೇವಾರಿ ಘಟಕವನ್ನು ಕೂಡಲೇ ಮುಚ್ಚಬೇಕು. ಜತೆಗೆ ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Kalaburagi ACB Raid: ಡ್ರೈನೇಜ್​ ಪೈಪಲ್ಲಿ ಹರಿದು ಬಂತು ಹಣ.. ಪಿಡಬ್ಲ್ಯೂಡಿ ಜೆಇ ಪ್ಲಾನ್​ಗೆ ಎಸಿಬಿ ಅಧಿಕಾರಿಗಳೇ ದಂಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.