ಮಳೆ ನೀರು ಹೊರ ಹಾಕುವಾಗ ಸ್ವಿಚ್ ಬೋರ್ಡ್​ನಲ್ಲಿ ಶಾರ್ಟ್ ಸರ್ಕ್ಯೂಟ್, ವ್ಯಕ್ತಿ ಸಾವು

author img

By

Published : Oct 12, 2021, 9:28 AM IST

rain

ಕರೆಂಟ್ ಆನ್ ಮಾಡುವ ವೇಳೆ ಸ್ವಿಚ್ ಬೋರ್ಡ್​ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರಿನ ಕೆ.ಪಿ.ಅಗ್ರಹಾರದಲ್ಲಿ ನಡೆದಿದೆ.

ಬೆಂಗಳೂರು: ತಡರಾತ್ರಿ ಸುರಿದ ಮಳೆಯ ಅವಾಂತರದಿಂದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ. ಕೆ.ಪಿ.ಅಗ್ರಹಾರದ 8ನೇ ಕ್ರಾಸ್​​ನಲ್ಲಿ ವಾಸವಾಗಿದ್ದ ವೆಂಕಟೇಶ್ ಮೃತ ವ್ಯಕ್ತಿ.

ವೆಂಕಟೇಶ್ ಪೇಂಟಿಂಗ್ ಕೆಲಸ‌ ಮಾಡುತ್ತಿದ್ದರೆ, ಇವರ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಸೋಮವಾರ ಇಬ್ಬರು ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಗೆ ಮಳೆ ನೀರು ನುಗ್ಗಿತ್ತು. ಜೊತೆಗೆ ಮಳೆಯಿಂದ ಏರಿಯಾದಲ್ಲಿ ವಿದ್ಯುತ್ ಹೋಗಿತ್ತು. ಒಳನುಗ್ಗಿದ್ದ ನೀರನ್ನು ಆಚೆ ಹಾಕುವಾಗ ಕರೆಂಟ್ ಬಂದಿದೆ‌‌. ಈ ವೇಳೆ ಕರೆಂಟ್ ಆನ್ ಮಾಡಲು ಮುಂದಾದಾಗ ಸ್ವಿಚ್ ಬೋರ್ಡ್​ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸ್ಥಳದಲ್ಲೇ ವೆಂಕಟೇಶ್ ಮೃತಪಟ್ಟಿದ್ದಾನೆ. ರಾತ್ರಿಯೇ ಕೆ.ಪಿ.ಅಗ್ರಹಾರ ಪೊಲೀಸರು‌ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕರಾದ ನೀಲು ಫಾತೀಮಾ, 'ಕಳೆದ 13 ವರ್ಷಗಳಿಂದ ವೆಂಕಟೇಶ್ ದಂಪತಿ ವಾಸವಾಗಿದ್ದರು. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮನೆಯೆಲ್ಲಾ ನೀರು ತುಂಬಿಕೊಂಡಿತ್ತು. ಈ ಹಿಂದೆ ಮಳೆ ಬಂದಾಗ ಮನೆಗೆ ನೀರು ನುಗ್ಗುತ್ತಿರಲಿಲ್ಲ. ಹೊಸ ಪೈಪ್ ವ್ಯವಸ್ಥೆ ಅಳವಡಿಸಿದ್ದರಿಂದ ಮನೆಗೆ ನೀರು ತುಂಬಿಕೊಂಡಿದೆ' ಎಂದರು.

ಇದನ್ನೂ ಓದಿ: Bengaluru Rain: ಏರ್​ಪೋರ್ಟ್​ ಟರ್ಮಿನಲ್ ಬಳಿ​ ನಿಂತ ನೀರು, ಸಂಚಾರಕ್ಕೆ ಅಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.